ಶ್ರದ್ಧಾ ಹತ್ಯೆಗೆ ಅಫ್ತಾಬ್‌ ಬಳಸಿದ್ದ ಐದು ಚೂರಿ ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಶ್ರದ್ಧಾ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಆಕೆಯನ್ನು ಕತ್ತರಿಸಲು ಆರೋಪಿ ಅಫ್ತಾಬ್‌ ಬಳಸುತ್ತಿದ್ದ ಐದು ಚೂರಿಗಳನ್ನು ಪತ್ತೆ ಹಚ್ಚಿದ್ದಾರೆ.

ಪ್ರಸ್ತುತ ಐದು ಚೂರಿಗಳು ದೊರೆತಿದ್ದು, ಇನ್ನೂ ಕೆಲವು ಚೂರಿಗಳ ಶೋಧ ಕಾರ್ಯ ಆರಂಭವಾಗಿದೆ ಎಂದು ದೆಹಲಿ ಪೊಲೀಸರು ಗುರುವಾರ ತಿಳಿಸಿದ್ದಾರೆ.

5-6 ಇಂಚು ಉದ್ದದ ಐದು ಚಾಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಅವುಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅದಲ್ಲದೆ, ಆಕೆಯನ್ನು ಗರಗಸದಿಂದಲೂ ಆತ ಕೊಯ್ದಿದ್ದ ಅದರ ಹುಡುಕಾಟ ಕೂಡ ಆರಂಭವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಕೆಯನ್ನು ಮೊದಲಿಗೆ ಗರಗಸದಲ್ಲಿ ಅಫ್ತಾಭ್‌ ಕೊಯ್ದಿದ್ದ. ಪ್ರಸ್ತುತ ಈ ಗರಗಸ ನಾಪತ್ತೆಯಾಗಿದೆ. ಸ್ವತಃ ಅಫ್ತಾಬ್‌ ಶ್ರದ್ಧಾಳ ದೇಹವನ್ನು ತುಂಡು ಮಾಡಲು ಸಾಕಷ್ಟು ಚೂರಿಗಳನ್ನು ಬಳಸಿದ್ದೆ ಎಂದು ತಿಳಿಸಿದ್ದ ಎಂದು ಸ್ವತಃ ದೆಹಲಿ ಪೊಲೀಸರು ಹೇಳಿದ್ದಾರೆ.

ಈ ನಡುವೆ ಅಫ್ತಾಭ್‌ ಅವರ ಇಡೀ ಕುಟುಂಬ ಮುಂಬೈನ ವಸೈನಲ್ಲಿ ವಾಸವಾಗಿದೆ. ದೆಹಲಿ ಪೊಲೀಸರ ಒಂದು ತಂಡ ಗುರುವಾರ ಮುಂಬೈಗೆ ಆಗಮಿಸಿ ತನಿಖೆ ನಡೆಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!