ಹೊಸದಿಗಂತ ಡಿಜಿಟಲ್ ಡೆಸ್ಕ್:
ಚತುಷ್ಪಥ ಹೆದ್ದಾರಿಯಲ್ಲಿ ಕಾರೊಂದು ಮೊದಲು ದ್ವಿಚಕ್ರ ವಾಹನಕ್ಕೆ ಗುದ್ದಿ ಆಮೇಲೆ ಡಿವೈಡರ್ಗೆ ಡಿಕ್ಕಿ ಹೊಡೆದು ಗಾಳಿಯಲ್ಲಿ ಹಾರಿಕೊಂಡು ಬಿದ್ದಿರುವ ಭಯಾನಕ ಅಪಘಾತ ತಮಿಳುನಾಡಿನಲ್ಲಿ ನಡೆದಿದೆ. ಕಾರಿನಲ್ಲಿದ್ದ ಐವರು ಪ್ರಯಾಣಿಕರು ಮೃತಪಟ್ಟಿದ್ದಾರೆ.
ಮಧುರೈ ಸಮೀಪದ ತಿರುಮಂಗಲಂ ಬಳಿ ಈ ಭೀಕರ ಘಟನೆ ನಡೆದಿದೆ. ವಿಲ್ಲಾಪುರಂ ಮೂಲದ ಕನಗವೇಲ್ ಎಂಬಾತ ಕುಟುಂಬ ಸಮೇತ ತಲವೈಪುರಂ ದೇವಸ್ಥಾನಕ್ಕೆ ಹೋಗಿ ವಾಪಸ್ ಆಗುತ್ತಿದ್ದರು. ಕಾರು ಚಾಲಕ ಮಣಿಕಂದಂ ಚತುಷ್ಪಥ ಹೈವೇಯಲ್ಲಿ ವೇಗವಾಗಿ ಬರುವಾಗ ಕಾರು ನಿಯಂತ್ರಣ ತಪ್ಪಿದೆ.
ಹೆದ್ದಾರಿಯ ಎಡಬದಿಯಲ್ಲಿ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಮೊದಲು ಕಾರು ಗುದ್ದಿದೆ. ಬಳಿಕ ಅದೇ ವೇಗದಲ್ಲಿ ಡಿವೈಡರ್ಗೆ ಡಿಕ್ಕಿ ಹೊಡೆದು ತರಗಲೆಯಂತೆ ಗಾಳಿಯಲ್ಲಿ ಹಾರಿ ಮತ್ತೊಂದು ಬದಿಗೆ ಪಲ್ಟಿ ಹೊಡೆದು ಬಿದ್ದಿದೆ.
ಕಾರು ಚಾಲಕ ದ್ವಿಚಕ್ರ ವಾಹನಕ್ಕೆ ಗುದ್ದಿದ್ದು, ಬೈಕ್ ಸವಾರ ಪಂಡಿ ಕೂಡ ಪ್ರಾಣ ಕಳೆದುಕೊಂಡಿದ್ದಾರೆ.
Five people, including four a family killed in a road accident near Thirumangalam in Madurai on Wednesday.@xpresstn @NewIndianXpress pic.twitter.com/um5goQeR4F
— S Mannar Mannan (@mannar_mannan) April 10, 2024