‌2 ದಿನಕ್ಕೆ ದುಡ್ಡೆಲ್ಲಾ ಖಾಲಿ ಮಾಡ್ಕೊಂಡು ʼಅಮ್ಮಾ.. ತಾಯಿʼ ಎಂದ ಪಾಕ್! ಭಾರತವನ್ನು ಕೆಣಕಿ ಬದುಕೋದುಂಟೇ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತ ಪಾಕಿಸ್ತಾನದ ಮೇಲೆ ಮಾಡಿರುವ ದಾಳಿಯಿಂದ ಪಾಕ್‌ ಚೇತರಿಸಿಕೊಳ್ಳೋಕೆ ಸಾಧ್ಯವೇ ಇಲ್ಲ, ಚೇತರಿಸಿಕೊಳ್ಳೋದು ಇರಲಿ ಸದ್ಯ ಈ ದಾಳಿಯನ್ನು ಅರಗಿಸಿಕೊಳ್ಲೋದಕ್ಕೂ ಭಿಕಾರಿ ದೇಶಕ್ಕೆ ಸಾಧ್ಯವಾಗಿಲ್ಲ.

ಭಾರತದಿಂದ ದಾಳಿ ಆರಂಭವಾಗುತ್ತಿದ್ದಂತೆಯೇ ಪಾಕ್‌ ಭಯಬಿದ್ದಿದೆ. ಎರಡೇ ದಿನಕ್ಕೆ ಇರುವ ಬರುವ ಎಲ್ಲ ದುಡ್ಡನ್ನು ಖಾಲಿ ಮಾಡಿಕೊಂಡು ಜಗತ್ತಿನ ಮುಂದೆ ಭಿಕ್ಷೆ ಬೇಡೋದಕ್ಕೆ ಆರಂಭಿಸಿದೆ.

ಈ ಬಗ್ಗೆ ಸ್ವತಃ ಪಾಕಿಸ್ತಾನ ಸರ್ಕಾರದ ಆರ್ಥಿಕ ವ್ಯವಹಾರಗಳ ವಿಭಾಗ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮನವಿ ಮಾಡಿದ್ದು, ಟ್ವೀಟ್ ಮೂಲಕ ಆರ್ಥಿಕ ನೆರವು ನೀಡುವಂತೆ ತನ್ನ ಮಿತ್ರ ರಾಷ್ಟ್ರಗಳಿಗೆ ಕೇಳಿಕೊಂಡಿದೆ. ಇಷ್ಟೇ ಅಲ್ಲದೇ ಯುದ್ಧದ ಭೀತಿಯಿಂದ ಕಂಗಾಲಾಗಿರುವ ಜನರಿಗೆ ಸಹಾಯ ಮಾಡದ ಸರ್ಕಾರ, ಅವರ ಜೀವನವನ್ನು ಸಂಕಷ್ಟಕ್ಕೆ ತಳ್ಳಿದೆ.

ಎಟಿಎಂನಲ್ಲಿ ಕೇವಲ ಮೂರು ಸಾವಿರ ರೂಪಾಯಿ ಮಾತ್ರ ವಿತ್‌ಡ್ರಾ ಮಾಡಿ ಎಂದು ಹೇಳಿದೆ. ಈ ಹಣದಲ್ಲಿ ಉಣ್ಣಲು, ಊರು ಬಿಡಲೂ ಆಗದೇ ಪಾಕ್‌ ಜನ ಪರದಾಡಿದ್ದಾರೆ. ಮೊದಲೇ ಅಮ್ಮಾ ತಾಯಿ ಎನ್ನುತ್ತಿದ್ದ ಈ ದೇಶ ಭಾರತವನ್ನು ಎದುರು ಹಾಕಿಕೊಂಡು ತಪ್ಪು ಮಾಡಿದೆ. ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು ಅನ್ನೋ ಗಾದೆ ಮಾತು ಪಾಕ್‌ ಪರಿಸ್ಥಿತಿಗೆ ಹೇಳಿ ಮಾಡಿಸಿದಂತಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!