Saturday, April 1, 2023

Latest Posts

ದೇವರಿಗಾಗಿ‌ ತನ್ನ ನಾಲಗೆಯನ್ನೇ ಸಮರ್ಪಿಸಿದ ಉಪ್ಪಾರ ಹೊಸಳ್ಳಿ ಗ್ರಾಮದ ಭಕ್ತ!

ಹೊಸ ದಿಗಂತ ವರದಿ, ಬಳ್ಳಾರಿ:

ದೇವರಿಗಾಗಿ ಹರಿಕೆ ಹೊತ್ತ ಭಕ್ತರು, ಕೂದಲು ಕೊಡುವುದು, ಉರುಳುಸೇವೆ ಮಾಡುವುದು, ಪ್ರಾಣಿ‌ ಬಲಿ ಕೊಡುವುದು, ದೀಡ್ನಮಸ್ಕಾರ ಹಾಕುವದನ್ನು ನೋಡಿದ್ದೇವೆ. ಆದರೇ, ಜಿಲ್ಲೆಯ ಸಿರಗುಪ್ಪ ತಾಲೂಕಿನ ಉಪ್ಪಾರ ಹೊಸಳ್ಳಿ ಗ್ರಾಮದ ಭಕ್ತನೊಬ್ಬ ದೇವರಿಗಾಗಿ‌ ನಾಲಿಗೆ ಕತ್ತರಿಸಿ ಸಮರ್ಪಿಸಿದ ಘಟನೆ ಭಾನುವಾರ ನಡೆದಿದೆ.

ಉಪ್ಪಾರ ಹೊಸಳ್ಳಿ ಗ್ರಾಮದ ವಿರೇಶ್ ನಾಲಿಗೆ ಕತ್ತರಿಸಿಕೊಂಡ ಅಂಧ ಭಕ್ತ. ಸುಪ್ರಸಿದ್ಧ ಶ್ರೀ ಶಂಕ್ರಪ್ಪ ತಾತನವರಿಗಾಗಿ ಹರಕೆ ಹೊತ್ತಕೊಂಡಿದ್ದ ಎಂದು ಹೇಳಲಾದ ಭಕ್ತ ವೀರೇಶ್ ಅವರು, ದೇವರು ನಾಲಿಗೆ ಕೇಳಿದ್ದಾನೆ ಎಂದು ಬೆಳಿಗ್ಗೆ ಚಾಕೂವಿನಿಂದ ತನ್ನ ನಾಲಿಗೆಯನ್ನು ಕೊಯ್ದುಕೊಂಡಿದ್ದಾನೆ, ಇದನ್ನು ನೋಡಿದ ಗ್ರಾಮಸ್ಥರಿಗೆ ಹಾಗೂ ಕುಟುಂಬಸ್ಥರಿಗೆ ಕೆಲ ಕಾಲ ದಿಗಿಲು ಬಡಿದಂತಾಗಿದೆ.

ಕೂಡಲೇ ಭಕ್ತ ವೀರೇಶ್ ನನ್ನು ಕೊಯ್ದುಕೊಂಡ ನಾಲಿಗೆಯೊಂದಿಗೆ ಗ್ರಾಮಸ್ಥರು ಸಮಿಪದ ಆಸ್ಪತ್ರೆಗೆ ದಾಖಲಿಸಿದ್ದಾರೆ, ಈ ಘಟನೆ ನೋಡಿದ ವೈದ್ಯರು ಕೂಡಲೇ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ತೇಳುವಂತೆ ಸೂಚಿಸಿದ್ದಾರೆ, ವಿಮ್ಸ್ ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ, ಆದರೇ, ಪ್ರಾಣಕ್ಕೆ ಯಾವುದೇ ಅಪಾಯ ವಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!