ಭ್ರಷ್ಟಾಚಾರ ನಿರ್ಮೂಲನೆಗಾಗಿ ಎಸಿಎಫ್ ಜಿಲ್ಲಾ ಘಟಕ ರಚನೆ: ಬಿ.ಎಚ್. ಜಮಾದಾರ

ಹೊಸದಿಗಂತ ವರದಿ ಹಾವೇರಿ:

ಭ್ರಷ್ಟಾಚಾರ ನಿರ್ಮೂಲನೆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿಸುತ್ತಿರುವ ಎಸಿಎಫ್ (ಆ್ಯಂಟಿ ಕರಪ್ಷನ್ ಪೋರ್ಸ್) ಜಿಲ್ಲಾ ಘಟಕವನ್ನು ರಚಿಸಿರುವುದಾಗಿ ರಾಜ್ಯದ ಉಸ್ತುವಾರಿ ಬಿ.ಎಚ್. ಜಮಾದಾರ ಹೇಳಿದರು.

ಇಲ್ಲಿನ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಘಟಕಕ್ಕೆ ಹಾವೇರಿ ಜಿಲ್ಲಾಧ್ಯಕ್ಷರಾಗಿ ಡಿ.ಬಿ. ಸೋಮಶೇಖರಗೌಡ, ಗೌರವ ಅಧ್ಯಕ್ಷರಾಗಿ ಶ್ರೀನಿವಾಸ ಹೆಚ್.ಬಿ., ಉಪಾಧ್ಯಕ್ಷರಾಗಿ ನಿಂಗಪ್ಪ ಜಿ.ಬಿ., ಕಾರ್ಯದರ್ಶಿಯಾಗಿ ಶಂಕ್ರಪ್ಪ ಕಡೇಮನಿ, ಖಜಾಂಚಿಯಾಗಿ ಮಹಾಂತೇಶ ಬಂಡಿವಡ್ಡರ, ಸಂಘಟನಾ ಕಾರ್ಯದರ್ಶಿಯಾಗಿ ವಿಶ್ವನಾಥ ಬಂಡಿವಡ್ಡರ ಹಾಗೂ ಸದಸ್ಯ ರಾಗಿ ಶಿವಕುಮಾರ ವಡ್ಡರ ನೇಮಕಗೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಜಿಲ್ಲಾಧ್ಯಕ್ಷ ಸೋಮಶೇಖರಗೌಡ ಮಾತನಾಡಿ ಹತ್ತು ಹಲವಾರು ಸಮಸ್ಯೆಗಳಿಂದ ನೊಂದ ಜನರ ಪರವಾಗಿ ಕೆಲಸ ಮಾಡಲು ಮತ್ತು ಅವರಿಗೆ ನ್ಯಾಯ ಒದಗಿಸಲು ಸಂಘಟನೆ ಕೆಲಸ ಮಾಡಲಿದೆ ಎಂದು ತಿಳಿಸಿದರು.

ಈ ವೇಳೆ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!