ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಸಿಎಂ ಸಿದ್ದರಾಮಯ್ಯ ಹೆಚ್ಎಎಲ್ ಏರ್ಪೋರ್ಟ್ಗೆ ತೆರಳಿ ಉಮೇಶ್ ಕತ್ತಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ʻಉಮೇಶ್ ಕತ್ತಿ ನಾನು ಇಬ್ಬರೂ ಒಳ್ಳೆಯ ಸ್ನೇಹಿತರು. ಆತ ನೇರ ನುಡಿಯ ವ್ಯಕ್ತಿಯಾಗಿದ್ದ. ಉಮೇಶ್ ಕತ್ತಿ ತಮ್ಮ ಆರೋಗ್ಯದ ಬಗ್ಗೆ ಮೊದಲಿಂದಲೂ ನಿರ್ಲಕ್ಷ್ಯ ವಹಿಸಿದ್ರು. ಸರ್ಕಾರ 3ದಿನ ಶೋಕಾಚರಣೆ ಮಾಡಬೇಕಾಗಿತ್ತು. ಉಮೇಶ್ ಕತ್ತಿ ಹಾಲಿ ಸಚಿವರಾಗಿದ್ದ ಕಾರಣ ಮೂರು ದಿನ ಶೋಕಾಚರಣೆ ಮಾಡಬೇಕಾಗಿತ್ತು. ಉಮೇಶ್ ಕತ್ತಿ ನನ್ನ ಜೊತೆ ಬಹಳ ಆತ್ಮೀಯವಾಗಿದ್ದರು.
ಇಂದು ನಾನು ಕೂಡ ಬೆಳಗಾವಿಗೆ ಹೋಗುತ್ತೇನೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬಸ್ಥರಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಇದೇ ವೇಳೆ ಹೆಚ್ಎಎಲ್ನಲ್ಲಿ ಸಚಿವ ಭೈರತಿ ಬಸವರಾಜ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಕೃಷಿ ಸಚಿವ ಬಿಸಿ. ಪಾಟೀಲ್, ಎಂಟಿಬಿ ನಾಗರಾಜ್, ಕೆಜೆ ಜಾರ್ಜ್ ಸೇರಿದಂತೆ ಅನೇಕರು ಉಮೇಶ್ ಕತ್ತಿ ಅಂತಿಮ ದರ್ಶನ ಪಡೆದರು.