ತಾಯಿ ಜತೆಗೆ ಸ್ನೇಹ: ಬಾಣಸಿಗನ ಕೊಲೆ ಮಾಡಿದ ಪುತ್ರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಾಯಿ ಜೊತೆಗೆ ಅಕ್ರಮ ಸಂಬಂಧ ಹೊಂದಿರುವ ಕಾರಣಕ್ಕಾಗಿ ಪೇಯಿಂಗ್ ಗೆಸ್ಟ್ ಬಾಣಸಿಗನನ್ನು ಪುತ್ರನೇ ಕೊಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ರಾಜಾಜಿನಗರ 6ನೇ ಬ್ಲಾಕ್‌ನಲ್ಲಿ ಪೇಯಿಂಗ್ ಗೆಸ್ಟ್ ಬಾಣಸಿಗ ರವಿ ಭಂಡಾರಿ(44) ಕೊಲೆಯಾದ ಬಾಣಸಿಗ.

ಶುಕ್ರವಾರ ರಾತ್ರಿ ರಾಹುಲ್‌ ತನ್ನ ಮನೆಯಲ್ಲಿಯೇ ರವಿ ಭಂಡಾರಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ತನ್ನ ತಾಯಿ ಪದ್ಮಾವತಿ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿರುವ ಶಂಕೆ ವ್ಯಕ್ತಪಡಿಸಿ ಆರೋಪಿ ಕೊಲೆ ಮಾಡಿದ್ದಾನೆ . ಸದ್ಯ ಆರೋಪಿ ತನ್ನ ಫೋನ್‌ ಸ್ವಿಚ್‌ ಆಫ್‌ ಮಾಡಿಕೊಂಡು ಪರಾರಿಯಾಗಿದ್ದಾನೆ.ಈ ಕುರಿತು ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಹೊನ್ನಾವರ ಮೂಲದ ರವಿ ಭಂಡಾರಿ, ಪತ್ನಿ ಮತ್ತು ಇಬ್ಬರು ಮಕ್ಕಳ ಜತೆಗೆ ನೆಲೆಸಿದ್ದರು. ಕೆಲಸ ಮಾಡದೆ ಮದ್ಯ ವ್ಯಸನಿಯಾಗಿದ್ದರು. ಮತ್ತೊಂದೆಡೆ ರಾಜಾಜಿನಗರದಲ್ಲಿ ಹಲವು ವರ್ಷಗಳಿಂದ ಪೇಯಿಂಗ್ ಗೆಸ್ಟ್ ನಡೆಸುತ್ತಿದ್ದ ಸುರೇಶ್ ಭಂಡಾರಿ, ತಮ್ಮ ಚಿಕ್ಕಪ್ಪ ರವಿ ಭಂಡಾರಿಯನ್ನು ಒಂದೂವರೆ ತಿಂಗಳ ಹಿಂದೆ ಕರೆತಂದು ಪಿಜಿಯಲ್ಲಿ ಅಡುಗೆ ಕೆಲಸಕ್ಕೆ ಇಟ್ಟುಕೊಂಡಿದ್ದನು.

ಇತ್ತ ಕಲುಬುರಗಿ ಮೂಲದ ಪದ್ಮಾವತಿ ದಂಪತಿ ಪುತ್ರ ರಾಹುಲ್ ಜೊತೆಗೆ ನೌಕರಿ ಅರಸಿ ಬೆಂಗಳೂರಿಗೆ ಬಂದು ಗೋಪಾಲಪುರದಲ್ಲಿ ನೆಲೆಸಿದ್ದರು. ಹಲವು ವರ್ಷಗಳಿಂದ ಸುರೇಶ್ ಭಂಡಾರಿ ಪಿಜಿಯಲ್ಲಿ ಪದ್ಮಾವತಿ ಕೆಲಸ ಮಾಡುತ್ತಿದ್ದಳು. 1 ವರ್ಷದ ಹಿಂದೆ ಪತಿ ಅಸುನೀಗಿದ್ದನು.

ಇತ್ತೀಚೆಗೆ ಪಿಜಿಗೆ ಬಂದಿದ್ದ ರವಿ ಭಂಡಾರಿ ಜತೆಗೆ ಪದ್ಮಾವತಿ ಸ್ನೇಹ ಬೆಳೆಸಿದ್ದಳು. ಈ ವಿಚಾರ ರಾಹುಲ್‌ಗೆ ತಿಳಿದು ಇಬ್ಬರಿಗೂ ಎಚ್ಚರಿಕೆ ಕೊಟ್ಟಿದ್ದ. ಆದರೂ ಸರಿದಾರಿಗೆ ಬಂದಿರಲಿಲ್ಲ.ಇದೆ ಕೋಪಕ್ಕೆ ರಾಹುಲ್, ಶುಕ್ರವಾರ ಮಧ್ಯಾಹ್ನ 3.30ರಲ್ಲಿ ರವಿ ಭಂಡಾರಿಗೆ ಕರೆ ಮಾಡಿ ತನ್ನ ಮನೆಗೆ ಕರೆಸಿಕೊಂಡಿದ್ದಾನೆ. ತಾಯಿ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಚಾಕುವಿನಿಂದ ರವಿ ಭಂಡಾರಿ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಆನಂತರ ರಾಹುಲ್, ತನ್ನ ಅಕ್ಕನಿಗೆ ಕರೆ ಮಾಡಿ ವಿಷಯ ತಿಳಿಸಿ ಮೊಬೈಲ್ ಆ ಮಾಡಿಕೊಂಡು ತಲೆಮರೆಸಿಕೊಂಡಿದ್ದಾನೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!