ಗುಂಡಿಯಲ್ಲಿ ಮುಳುಗಿ ಬಾಲಕ ಸಾವು: ಮೃತರ ಕುಟುಂಬಕ್ಕೆ ನೆರವು

ಹೊಸದಿಗಂತ ವರದಿ,ಕಲಬುರಗಿ:

ಕಲಬುರಗಿ ಉತ್ತರ ಮತಕ್ಷೇತ್ರದ ದುಬೈ ಕಾಲನಿಯಲ್ಲಿ ತಗ್ಗು ಗುಂಡಿಯಲ್ಲಿ ಮುಳುಗಿ ಮೃತಪಟ್ಟಿದ್ದ ಬಾಲಕರ ಮನೆಗೆ ಶನಿವಾರ ಸಂಸದ ಡಾ.ಉಮೇಶ ಜಾಧವ್,ವಿಧಾನಪರಿಷತ್ ಸದಸ್ಯ ಬಿ ಜಿ ಪಾಟೀಲ ಭೇಟಿ ನೀಡಿ, ಮುಖಂಡ ಚಂದು ಪಾಟೀಲ್ ಭೇಟಿಯಾಗಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ನಂತರ ಅವಘಡ ನಡೆದ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು .ಚಂದು ಪಾಟೀಲ್ ಫೌಂಡೇಷನ್ನಿಂದ ಪ್ರತಿ ಬಾಲಕನ ಕುಟುಂಬದವರಿಗೆ ಪರಿಹಾರ ಧನದ ನೆರವು ನೀಡಲಾಯಿತು.

ಸರ್ಕಾರದಿಂದ ಬರುವ ಎಲ್ಲ ನೆರವು, ಸೌಲಭ್ಯ ಕೊಡಿಸುವ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಕಲಬುರ್ಗಿ ಮಹಾನಗರ ಪಾಲಿಕೆಯ ಮಹಾ ಪೌರರಾದ ವಿಶಾಲ ದರ್ಗಿ,ಉಪ ಮಹಾ ಪೌರರಾದ ಶಿವಾನಂದ ಪಿಸ್ತಿ, ಪಕ್ಷದ ಮುಖಂಡರು, ಕಾರ್ಯಕರ್ತರು ಜೊತೆಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!