ಸರ್ಕಾರಿ ನೌಕರಿ ಸಿಗದ ಹತಾಶೆ: ಮನನೊಂದು ನೇಣಿಗೆ ಶರಣಾದ ಯುವಕ

ಹೊಸದಿಗಂತ ವರದಿ, ವಿಜಯಪುರ:
ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ವಿಕೆಜಿ ಲಾಡ್ಜ್‌ನಲ್ಲಿ ನಡೆದಿದೆ.
ನಗರದ ಶಹಾಪೇಟೆ ನಿವಾಸಿ ಹರ್ಷ ಜಯರಾಜ್ ಪಟ್ಟಣಶೆಟ್ಟಿ (26) ಆತ್ಮಹತ್ಯೆಗೆ ಶರಣಾದ ಯುವಕ‌. ಸರ್ಕಾರಿ ನೌಕರಿಗೆ ಪ್ರಯತ್ನಿಸಿದ್ದ ಹರ್ಷಾ ಅದು ದೊರಕದ ಕಾರಣಕ್ಕೆ ಹತಾಶನಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!