ಕಾವೇರಿ ವಿವಾದ: ಶುಕ್ರವಾರದ ಬಂದ್‌ಗೆ ಕನ್ನಡ ಚಿತ್ರೋದ್ಯಮದಿಂದ ಸಂಪೂರ್ಣ ಬೆಂಬಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಸೆಪ್ಟೆಂಬರ್ 29ರಂದು (ಶುಕ್ರವಾರ) ಕರ್ನಾಟಕ ಬಂದ್‌ಗೆ ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ. ಈ ಬಂದ್‌ಗೆ ಕನ್ನಡ ಚಿತ್ರೋದ್ಯಮವೂ ಬೆಂಬ ನೀಡಿದ್ದು, ಇಂದು ಸಂಜೆ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಪ್ರತಿಭಟನೆಯ ರೂಪುರೇಷೆ ಚರ್ಚೆಯಾಗಲಿದೆ.

ಈ ಕುರಿತು ಮಾತನಾಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್​ಎಂ ಸುರೇಶ್ ʻನೆಲ, ಜಲ, ಭಾಷೆ ವಿಚಾರಕ್ಕೆ ಸಂಬಂಧಿಸಿದಂತಹ ಹೋರಾಟಗಳಲ್ಲಿ ಕನ್ನಡ ಚಿತ್ರರಂಗ ಯಾವಾಗಲೂ ಜೊತೆಯಾಗಿರುತ್ತದೆ. ಶುಕ್ರವಾರದ ಬಂದ್‌ಗೆ ನಮ್ಮ ಬೆಂಬಲ ಇದೆ. ಇದರ ಸಂಪೂರ್ಣ ರೂಪುರೇಷೆ ಬಗ್ಗೆ ಇಂದು ಸಂಜೆ ಸಭೆ ನಡೆಸಿ, ಚರ್ಚೆ ಮಾಡುತ್ತೇವೆ. ಪ್ರತಿಭಟನೆಯಲ್ಲಿ ಸಿನಿರಂಗದ ಕಲಾವಿದರ ಭಾಗಿಯಾಗುವ ಬಗ್ಗೆ ತೀರ್ಮಾನವಾಗಲಿದೆʼ ಎಂದರು.

ಬೆಂಗಳೂರು ಬಂದ್‌ ವೇಳೆಯೂ ಕನ್ನಡ ಚಿತ್ರರಂಗ ಬೆಂಬಲ ಸೂಚಿಸಿ, ಶೂಟಿಂಗ್‌ ಸ್ಥಗಿತಗೊಳಿಸಿತ್ತು. ಶುಕ್ರವಾರದ ಬಂದ್‌ ವೇಳೆಯೂ ಸಿನಿಮಾ, ಸೀರಿಯಲ್‌ ಶೂಟಿಂಗ್‌ ನಿಲ್ಲಿಸುವ ಸಾಧ್ಯತೆಯಿದೆ. ಅಂದು ಯಾವುದೇ ಸಿನಿಮಾ ಪ್ರದರ್ಶನ ಕಾಣುವುದೂ ಅನುಮಾನವಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!