ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಜೆಟ್ ಘೊಷಣೆ ಬಳಿಕ ಕಾಂಗ್ರೆಸ್ ನಾಯಕ ಡಿ.ಕೆ.ಸುರೇಶ್ ಸ್ವತಂತ್ರ ರಾಷ್ಟ್ರಕ್ಕೆ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಕ್ಷಿಣ ಭಾರತದ ಬಜೆಟ್ ಅನ್ನು ಉತ್ತರ ಭಾರತಕ್ಕೆ ಮೀಸಲಿಡುತ್ತಿದ್ದಾರೆ. ಇದರಿಂದ ನಮಗೆ ಆರ್ಥಿಕ ಸಮಸ್ಯೆ ಉಂಟಾಗುತ್ತದೆ ಎಂದು ಹೇಳಿದರು.
ಇದೇ ಪರಿಸ್ಥಿತಿ ಮುಂದುವರಿದರೆ ದಕ್ಷಿಣ ಭಾರತ ಮತ್ತೊಂದು ಕೂಗು ಎತ್ತಬೇಕಾಗುತ್ತದೆ ಎಂದರು. ಕೇಂದ್ರ ಸರಕಾರ ಈ ಸಮಸ್ಯೆ ಬಗೆಹರಿಸಬೇಕು. ದಕ್ಷಿಣ ಭಾರತದ ಬಜೆಟ್ ಅನ್ನು ದಕ್ಷಿಣ ಭಾರತದಲ್ಲಿಯೇ ಖರ್ಚು ಮಾಡಬೇಕು ಎಂದರು.
ಸಂಸದ ಸುರೇಶ್ ಮಾತನಾಡಿ, ಈ ಬಾರಿಯ ಬಜೆಟ್ನಲ್ಲಿ ಚುನಾವಣೆಗೆ ಸಂಬಂಧಿಸಿದ ಘೋಷಣೆಗಳಿದ್ದರೂ ಅದು ಕೇವಲ ಕುತಂತ್ರವಾಗಿದೆ ಎಂದರು.