ದಿನಭವಿಷ್ಯ: ಆರ್ಥಿಕ ಸಮಸ್ಯೆ ನಿರ್ವಹಿಸಲು ಅನಿರೀಕ್ಷಿತ ಪ್ರಯಾಣ

ಮೇಷ
ನಿಮ್ಮ ಕಾರ್ಯಶೈಲಿ ಬದಲಿಸಬೇಕು. ಎಲ್ಲರ ಜತೆ ಹೊಂದಾಣಿಕೆ ಬೆಳೆಸಿಕೊಳ್ಳಿ. ಇತರರ ಸಲಹೆಗಳಿಗೆ ಕಿವಿಗೊಡಿ. ಹಠಮಾರಿ ಧೋರಣೆ ಒಳಿತು ತರದು.

ವೃಷಭ
ನಿಮ್ಮ ಕಾರ್ಯದಲ್ಲಿ ಅವಸರ ಮಾಡಬೇಡಿ. ಅದರಿಂದ ನೀವು ಬಯಸಿದ ಫಲ ಸಿಗದು. ಕುಟುಂಬಸ್ಥರ ಜತೆ ಅನವಶ್ಯ ಜಗಳ ಕಾಯಬೇಡಿ.

ಮಿಥುನ
ಇಂದು ಯಾವುದೇ ಗಂಭೀರ ಕಾರ್ಯ ಮಾಡದೆ ನಿರಾಳವಾಗಿರಲು ಬಯಸುವಿರಿ. ಆದರೆ ಕೆಲಸದೊತ್ತಡ ಅದಕ್ಕೆ ಅವಕಾಶ ನೀಡದು.

ಕಟಕ
ನೀವು ಮಾಡುವ ಕಾರ್ಯ ಇಂದು ನಿಮಗೆ ಹಿತ ತರಲಾರದು. ಪ್ರತಿಕೂಲ ಪರಿಣಾಮ ಉಂಟಾದೀತು. ಇತರರ ಪ್ರಲೋಭನೆಗೆ ಒಳಗಾಗಬೇಡಿ.

ಸಿಂಹ
ಇತರರಿಗೆ ನೆರವು ನೀಡುವ ಮೂಲಕ ತೃಪ್ತಿ, ಸಂತೋಷ ಪಡೆಯುವಿರಿ. ಕೌಟುಂಬಿಕ ಸಹಕಾರ. ವೃತ್ತಿಯಲ್ಲಿ ನಿಮಗೆ ಅನುಕೂಲ ಸನ್ನಿವೇಶ.

ಕನ್ಯಾ
ಗುರಿ ಸಾಧಿಸಲು ಏಕಾಗ್ರತೆಯ ಕೊರತೆ ನಿಮ್ಮನ್ನು ಕಾಡುವುದು. ಕೌಟುಂಬಿಕ ವಿಷಯ ಮನಸ್ಸಿನ ನೆಮ್ಮದಿ ಕಲಕುತ್ತದೆ. ಆತ್ಮವಿಶ್ವಾಸ ಕಳೆದುಕೊಳ್ಳದಿರಿ.

ತುಲಾ
ಪ್ರೀತಿಪಾತ್ರರಲ್ಲಿ ನಿಮ್ಮ ಭಾವನೆ ವ್ಯಕ್ತಪಡಿಸಲು ಹಿಂಜರಿಯಬೇಕಿಲ್ಲ. ಸಂಬಂಧವನ್ನು ಗಟ್ಟಿಗೊಳಿಸಿರಿ. ಆರ್ಥಿಕ ಒತ್ತಡ ನಿವಾರಣೆ. ಕೌಟುಂಬಿಕ ಶಾಂತಿ.

ವೃಶ್ಚಿಕ
ಕೌಟುಂಬಿಕ ಭಿನ್ನಮತ ಶಮನಕ್ಕೆ ಹೆಚ್ಚು ಗಮನ ಕೊಡಿ. ನೀವೇ ಬಗ್ಗುವುದಕ್ಕೆ ಹಿಂಜರಿಕೆ ಬೇಕಿಲ್ಲ. ಆರ್ಥಿಕ ಸಮಸ್ಯೆಗೆ ಪರಿಹಾರ ದಾರಿ ತೋರುವುದು.

ಧನು
ಕುಟುಂಬ ಸದಸ್ಯರ ಜತೆ ಕಾಲ ಕಳೆಯಿರಿ. ಅವರ ಬೇಕುಬೇಡಗಳನ್ನು ಆಲಿಸಿರಿ. ವೃತ್ತಿಯಲ್ಲಿ ಕೆಲವು ಹಿನ್ನಡೆ ಕಾಣುವಿರಿ. ಆರ್ಥಿಕ ಮುಗ್ಗಟ್ಟು.

ಮಕರ
ಹೊಸ ಸಮಸ್ಯೆ ಹುಟ್ಟಲಿದೆ. ಅದಕ್ಕೆ ಸೂಕ್ತ ಪರಿಹಾರ ಕೂಡ ಕಂಡುಕೊಳ್ಳುವಿರಿ. ಹಿಂದಿನ ಅನುಭವ ನೆರವಾಗಲಿದೆ. ಆರ್ಥಿಕ ಒತ್ತಡ ನಿವಾರಣೆ.

ಕುಂಭ
ಮುಖ್ಯ ಕೆಲಸದಲ್ಲಿ ಗೊಂದಲ, ಹತಾಶೆ ಕಾಡುವುದು. ಕೌಟುಂಬಿಕ ಮತ್ತು ವೃತ್ತಿಯ ಒತ್ತಡ ಇದಕ್ಕೆ ಕಾರಣ. ಮಾನಸಿಕ ದೃಢತೆ ಕಾಯ್ದುಕೊಳ್ಳಿ.

ಮೀನ
ನಿಮ್ಮ ವರ್ತನೆಯಲ್ಲಿ ಇಂದು ಗುಣಾತ್ಮಕ ಬದಲಾವಣೆ. ಪ್ರಾಕ್ಟಿಕಲ್ ಆಗಿ ಯೋಚಿಸುವಿರಿ. ಅತಿ ಭಾವುಕತೆ ಒಳಿತಲ್ಲ ಎಂದು ಅರಿಯುವಿರಿ. ವೃತ್ತಿಯಲ್ಲಿ ಸಫಲತೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!