May 4, 2026
Monday, May 4, 2026
spot_img

India vs South Africa ಗೆಲುವಿನ ನಂತರ ‘ಗಂಭೀರ್’ ಪ್ರತಿಕ್ರಿಯೆ! ಅವರವರ ಕೆಲಸ ನೋಡ್ಕೊಂಡು ಸುಮ್ಮನಿರೋದು ಒಳ್ಳೆದು ಅಂದಿದ್ಯಾಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ-ಸೌತ್ ಆಫ್ರಿಕಾ ಏಕದಿನ ಸರಣಿಯ ಮೂರು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಶಕ್ತಿಶಾಲಿ ಪ್ರದರ್ಶನ ನೀಡಿ ಸರಣಿ ಗೆದ್ದಿದೆ. ರಾಂಚಿ, ರಾಯ್‌ಪುರ ಮತ್ತು ವಿಶಾಖಪಟ್ಟಣದಲ್ಲಿ ನಡೆದ ಪಂದ್ಯಗಳಲ್ಲಿ ಭಾರತ ತಂಡದ ಆಟಗಾರರು ತಮ್ಮ ಸಂಪೂರ್ಣ ಸಾಮರ್ಥ್ಯ ತೋರಿಸಿದ್ದಾರೆ. ಈ ಗೆಲುವಿನ ನಂತರ, ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಟೀಕಾಗಾರರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ನಾವು ಬಯಸಿದಂತೆ ಫಲಿತಾಂಶ ಸಿಕ್ಕಿಲ್ಲ. ವಿಶೇಷವಾಗಿ ಶುಭ್​ಮನ್ ಗಿಲ್ ಗಾಯದಿಂದಾಗಿ ಕೊಲ್ಕತ್ತಾ ಟೆಸ್ಟ್‌ನಲ್ಲಿ ನಾಯಕತ್ವ ಕೊರತೆಯು ತಂಡದ ಪ್ರದರ್ಶನವನ್ನು ಪ್ರಭಾವಿತಗೊಳಿಸಿತು. ಕ್ರಿಕೆಟ್‌ಗೆ ಸಂಬಂಧವಿಲ್ಲದ ಕೆಲವರು ಕೋಚಿಂಗ್ ಕುರಿತು ಟೀಕೆ ಮಾಡುತ್ತಿದ್ದಾರೆ ಎಂದು ಗಂಭೀರ್ ಆರೋಪಿಸಿದ್ದಾರೆ. ಐಪಿಎಲ್ ಮಾಲೀಕರೊಬ್ಬರು ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದು, ಅದರಲ್ಲಿ ಹಸ್ತಕ್ಷೇಪ ಮಾಡುವ ಹಕ್ಕಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

‘ನಾವು ಅವರ ಕ್ಷೇತ್ರಕ್ಕೆ ಹೋಗುವುದಿಲ್ಲ. ಆದ್ದರಿಂದ, ನಾವು ಮಾಡುವ ಕೆಲಸದಲ್ಲಿ ಅವರಿಗೆ ಹಸ್ತಕ್ಷೇಪ ಮಾಡಲು ಯಾವುದೇ ಹಕ್ಕಿಲ್ಲ. ಹೀಗಾಗಿ ಅವರವರ ಕೆಲಸ ನೋಡ್ಕೊಂಡು ಸುಮ್ಮನಿರುವುದು ಉತ್ತಮ’ ಎಂದು ಗೌತಮ್ ಗಂಭೀರ್ ತಿರುಗೇಟು ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !