ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್ನೆರಡು ದಿನಗಳಲ್ಲಿ ನಾಡಿನಾದ್ಯಂತ ಸಂಭ್ರಮದ ಗೌರಿ ಗಣೇಶ ಹಬ್ಬ ಆಚರಣೆ ನಡೆಯಲಿದ್ದು, ಬೆಂಗಳೂರು ಪೊಲೀಸ್ ಇಲಾಖೆ ಈ ಬಗ್ಗೆ ಗೈಡ್ಲೈನ್ಸ್ ಬಿಡುಗಡೆ ಮಾಡಿದೆ. ಗಣೇಶ ಕೂರಿಸುವ ಸ್ಥಳ, ವಿಚಾರದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಕ್ರಮ ಕೈಗೊಳ್ಳಲು ಪೊಲೀಸರು ಗೈಡ್ಲೈನ್ಸ್ ಬಿಡುಗಡೆ ಮಾಡಿದ್ದಾರೆ.
ಗೈಡ್ಲೈನ್ಸ್ ಇಂತಿದೆ..
- ಸಾರ್ವಜನಿಕ ಸ್ಥಳದಲ್ಲಿ ಗಣಪತಿ ಕೂರಿಸುವುದಾದರೆ ಸ್ಥಳೀಯ ಪೊಲೀಸ್ ಠಾಣೆಯಿಂದ ಅನುಮತಿ ಪಡೆಯಬೇಕು.
- ವಿವಾದಿತ ಸ್ಥಳಗಳಲ್ಲಿ ಗಣೇಶನ ಪ್ರತಿಷ್ಠಾಪನೆಗೆ ನಿಷೇಧ.
- ಪೆಂಡಾಲ್, ಚಪ್ಪರ ಹಾಗೂ ಶಾಮಿಯಾನ ಹಾಕಲು ವಿಶೇಷ ಅನುಮತಿ
- ಬೆಂಕಿ ನಂದಿಸುವ ಸಾಧನ ಹಾಗೂ ಸಿಸಿಟಿವಿ ಕಡ್ಡಾಯ
- ಕಾನೂನು ಬಾಹಿರವಾಗಿ ಹಣ ಸಂಗ್ರಹಣೆ ಮಾಡುವಂತಿಲ್ಲ
- ಮೆರವಣಿಗೆ ವೇಳೆ ಏನೇ ತೊಂದರೆ ಎದುರಾದರೂ ಸಂಘಟಿಕರೇ ಹೊಣೆ
- ಅಗ್ನಿ ಅವಘಡ ಸಂಭವಿಸುವ ಪದಾರ್ಥಗಳನ್ನು ಸ್ಥಳದಲ್ಲಿ ಇಡುವಂತಿಲ್ಲ
- ಡಿಜೆ ಸೌಂಡ್ ಸಿಸ್ಟಮ್ ಬಳಕೆ ಮಾಡುವಂತಿಲ್ಲ
- ವಿಸರ್ಜನೆ ಕಾರ್ಯಕಮಕ್ಕೆ 10 ಗಂಟೆ ಡೆಡ್ಲೈನ್