ಫೋಟೊ ಹೇಳುವ ಕತೆ: ಗೆಹ್ಲೊಟ್ ಪಕ್ಕದಲ್ಲಿ ಅದಾನಿ!

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

“ಇದು ಅಂಬಾನಿ-ಅದಾನಿಗಳ ಸರ್ಕಾರ. ಕೆಲ ಉದ್ಯಮಪತಿಗಳಷ್ಟೇ ಮೋದಿ ಸರ್ಕಾರದ ನೀತಿಗಳಿಂದ ದುಡ್ಡು ಮಾಡಿಕೊಂಡಿದ್ದಾರೆ ”- ಇದು ಮೋದಿ ಸರ್ಕಾರವನ್ನು ಟೀಕಿಸುವಾಗಲೆಲ್ಲ ಕಾಂಗ್ರೆಸ್ಸಿನ ರಾಹುಲ್ ಗಾಂಧಿ ಹೇಳುತ್ತ ಬಂದಿರುವ ಸಾಲುಗಳು. 

ರಾಜಸ್ಥಾನದ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಶುಕ್ರವಾರ ‘ಇನ್ವೆಸ್ಟ್ ಗುಜರಾತ್ ಸಮಿಟ್ 2022’ ಪ್ರಾರಂಭಿಸಿದರು. ಅದರಲ್ಲಿ ಗಮನ ಸೆಳೆದ ಫೋಟೊ ಎಂದರೆ ಉದ್ಯಮಿ ಗೌತಂ ಅದಾನಿ ಮುಖ್ಯಮಂತ್ರಿ ಗೆಹ್ಲೊಟ್ ಅವರ ಪಕ್ಕದಲ್ಲೇ ಕುಳಿತು ಆಪ್ತ ಮಾತುಕತೆಯಲ್ಲಿ ನಿರತವಾದದ್ದು. ಬೇರೆ ಉದ್ಯಮಿಗಳೂ ಪಾಲ್ಗೊಂಡಿದ್ದರಾದರೂ ಅದಾನಿ ಉಪಸ್ಥಿತಿ ವಿಶೇಷ ಗಮನ ಸೆಳೆಯಿತು.

ಅಂಬಾನಿ-ಅದಾನಿ ಉನ್ನತಿಯನ್ನು ಯಾರೊಬ್ಬರಿಗೋ ಸಮೀಕರಿಸುವುದು, ಮೋದಿ ಸರ್ಕಾರವನ್ನು ದೂರುವುದು ರಾಜಕೀಯ ಸ್ಟಂಟ್ ಅಲ್ಲವೇ ಎಂಬ ಪ್ರಶ್ನೆಯನ್ನು ಇದು ಮತ್ತಷ್ಟು ಗಾಢಗೊಳಿಸಿದೆ. ಜತೆಗೆ, ಕಾಂಗ್ರೆಸ್ ಅಧ್ಯಕ್ಷ ಪದವಿಗೆ ಸ್ಪರ್ಧಿಸುವ ವಿಷಯದಲ್ಲಿ ಗಾಂಧಿ ಕುಟುಂಬದಿಂದ ಬೆಂಬಲ ಸಿಗದೇ ದೂರವಾದ ನಂತರ ಇದು ಗೆಹ್ಲೋಟ್ ತಮ್ಮ ಸ್ವತಂತ್ರಮತಿಯ ಬಗ್ಗೆ ರಾಹುಲ್ ಗಾಂಧಿಗೆ ಕೊಡುತ್ತಿರುವ ಸಂದೇಶವಾ ಎಂದೂ ಕೆಲವರು ಕೇಳುವಂತಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!