ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಕುರಿತು ಹೊಸದಿಗಂತ ವಿಶೇಷ ಪುರವಣಿ ಬಿಡುಗಡೆ!

ಹೊಸದಿಗಂತ ವರದಿ ಕೊಪ್ಪಳ:‌ 

ಗವಿಸಿದ್ದೇಶ್ವರ ಜಾತ್ರೆ ಸಂಭ್ರಮದ ಕುರಿತು ಹೊಸದಿಗಂತ ದಿನಪತ್ರಿಕೆ ಹೊರತಂದ ವಿಶೇಷ ಪುರವಣಿಯನ್ನು ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಬಿಡುಗಡೆಗೊಳಿಸಿದರು.

ಜಾತ್ರೋತ್ಸವದ ಬಗ್ಗೆ ದಕ್ಷಿಣದ ಕುಂಭಮೇಳ ಗವಿಶ್ರೀ ಜಾತ್ರಾ ಸಂಭ್ರಮ ಶೀರ್ಷಿಕೆಯಡಿ ಹೊರತಂದ ವಿಶೇಷ ಪುರವಣಿಯನ್ನು ಭಾನುವಾರ ಬೆಳಗ್ಗೆ ಗವಿಮಠದ ಶ್ರೀಗಳು ಬಿಡುಗಡೆಗೊಳಿಸಿದರು.

ಈ ವೇಳೆ ಸ್ವಾಮೀಜಿ, ಪತ್ರಿಕೆ ಓದಿ ಅತ್ಯುತ್ತಮವಾಗಿ ಪುರವಣಿ ಮೂಡಿಬಂದಿದೆ ಎಂದು ಹೊಸದಿಗಂತ ಬಳಗಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ವರದಿಗಾರ ಮಂಜುನಾಥ ಗಂಗಾವತಿ, ಪ್ರಸಾರಾಂಗ ವಿಭಾಗದ ಪ್ರಭು ಹಿರೇಮಠ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!