ಕಲುಷಿತ ನೀರು ಸೇವಿಸಿ ಬಾಲಕಿ ಸಾವು, ಮುಗಿಲು ಮುಟ್ಟಿದ ಆಕ್ರಂದನ

ಹೊಸದಿಗಂತ ವರದಿ ಕುಷ್ಟಗಿ:

ತಾಲೂಕಿನ ಬಿಜಕಲ್ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಕಳೆದ ಏಳು ದಿನಗಳಿಂದ ಪಡೆಯುತ್ತಿದ್ದ ಬಾಲಕಿ ಇಂದು ಮೃತಪಟ್ಟಿದ್ದಾಳೆ.

ಕುಷ್ಟಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಬಿಜಕಲ್ ಗ್ರಾಮದ 9 ವರ್ಷದ ನಿರ್ಮಲಾ ತಂದಿ ವೀರಪ್ಪ ನೀರಲೂಟಿ ಮೃತ ದುರ್ದೈವಿ ಬಾಲಕಿ.

ಮೃತಳ ತಂದೆ-ತಾಯಿ ಕೇರಳಕ್ಕೆ ದುಡಿಮೆ ಅರಸಿ ಗುಳೇ ಹೋಗಿದ್ದಾರೆ. ಅತ್ತೆಯ ಜೊತೆಗೆ ಬಿಜಕಲ್ ಗ್ರಾಮದಲ್ಲಿ ನೆಲೆಸಿದ್ದ ಬಾಲಕಿ, ಹೆಸರೂರು ಗ್ರಾಮದ ಶಾಲೆಯಲ್ಲಿ 3ನೇ ತರಗತಿ ಓದುತಿದ್ದಳು. ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಬಾಲಕಿ ಸಾವಿನ ಸುದ್ದಿ ಸುದ್ದಿ ಆಸ್ಪತ್ರೆ ಬಳಿ ಕುಟುಂಬಸ್ಥರ ರೋದನ ಮುಗಿಲು ಮುಟ್ಟಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!