ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಸಿಲ ಬೇಗೆಯಲ್ಲಿ ನಲುಗಿರುವ ಕೇರಳಕ್ಕೆ ಈಗ ಕಡಲು ದುಃಸ್ವಪ್ನವಾಗಿ ಕಾಡುತ್ತಿದೆ.
ರಾಜ್ಯದ ತಿರುವನಂತಪುರ, ಕೊಲ್ಲಂ, ಆಲಪ್ಪುಳ, ತ್ರಿಶೂರ್ ಭಾಗದಲ್ಲಿ ಕಡಲು ಉಕ್ಕೇರಿ ಬರುತ್ತಿದ್ದು, ಭಾರೀ ಗಾತ್ರದ ಅಲೆಗಳು ತೀರ ಪ್ರದೇಶದಲ್ಲಿ ಹಲವು ಅಧ್ವಾನ ಸೃಷ್ಟಿಸುತ್ತಿದೆ. ಕಡಲಿನ ಆರ್ಭಟಕ್ಕೆ ಕೊಲ್ಲಂಕೋಟ್, ನಿರೋಡಿ ಭಾಗದಲ್ಲಿ ಸುಮಾರು 50ಕ್ಕೂ ಅಧಿಕ ಮನೆಗಳು ಜಾಲವೃತಗೊಂಡಿವೆ.
ಪೊಜಿಕಾಕರ ಪ್ರದೇಶದಲ್ಲಿ ರಸ್ತೆಯನ್ನೂ ಕಡಲಿನ ನೀರು ನುಂಗಿಹಾಕಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಇಲ್ಲಿನ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದ್ದು, ಕಡಲ ತೀರದ ನಿವಾಸಿಗಳು ಎಚ್ಚರಿಕೆ ವಹಿಸುವಂತೆ ಆಡಳಿತ ಸೂಚಿಸಿದೆ. ಕೆಲ ದಿನಗಳ ಹಿಂದಷ್ಟೇ ಕೆಲವೆಡೆ ಕಡಲು ಹಿಂದಕ್ಕೆ ಸರಿದಿತ್ತು. ಇದರ ಬೆನ್ನಿಗೇ ಈಗ ಕಡಲು ಮುಂದಕ್ಕೆ ಸರಿದಿದ್ದು, ಕಡಲ್ಕೊರೆತದಿಂದ ಬಹಳಷ್ಟು ಭೂ ಭಾಗಕ್ಕೆ ಹಾನಿಯಾಗುವ ಸಾಧ್ಯತೆ ಇದೆ.