ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಳೆ ಪ್ರಧಾನಿ ಮೋದಿಯವರ ಹುಟ್ಟುಹಬ್ಬಕ್ಕೆ ನೂರಾರು ಸ್ಥಳಗಳಲ್ಲಿ ನೂರಾರು ಕಾರ್ಯಕ್ರಮಗಳು ನಡೆಯುತ್ತವೆ. ರಕ್ತದಾನ ಶಿಬಿರಿ, ಸಿಹಿ ಹಂಚುವುದು, ಬಡವರಿಗೆ ಬಟ್ಟೆ ಆಹಾರ ವಿತರಣೆ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಆದರೆ ತಮಿಳುನಾಡು ಬಿಜೆಪಿ ನೂತನವಾದ ಘೋಷಣೆಯೊಂದನ್ನು ಮಾಡಿದೆ. ಸೆ.17 ರಂದು ಹುಟ್ಟುವ ನವಜಾತ ಶಿಶುಗಳಿಗೆ ಎರಡು ಗ್ರಾಂ ತೂಕದ ಚಿನ್ನದ ಉಂಗುರ ನೀಡಲಾಗುತ್ತದೆ.
ಚೆನ್ನೈನ ಸರ್ಕಾರಿ ಆರ್ಎಸ್ಆರ್ಎಂ ಆಸ್ಪತ್ರೆಯಲ್ಲಿ ಜನಿಸುವ ಮಕ್ಕಳಿಗೆ ಚಿನ್ನದ ಉಂಗುರ ನೀಡಲಾಗುತ್ತದೆ ಎಂದು ಮೀನುಗಾರಿಕೆ, ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಎಲ್. ಮುರುಗನ್ ಹೇಳಿದ್ದಾರೆ. ಸ್ಥಳೀಯ ಘಟಕದ ಅನುಸಾರ 10-15 ಮಕ್ಕಳು ಜನಿಸುವ ಸಾಧ್ಯತೆ ಇದೆ ಎನ್ನಲಾಗಿದೆ.