ಹೊಸದಿಗಂತ ವರದಿ ಬಾಗಲಕೋಟೆ :
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ದೇಶದ ಅಭಿವೃದ್ಧಿ ದೃಷ್ಟಿಯಿಂದ ಹಾಗೂ ಜನರ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ಉತ್ತಮ ಬಜೆಟ್ ಘೋಷಣೆ ಮಾಡಿದ್ದಾರೆ ಎಂದು ಸಂಸದ ಪಿ.ಸಿ.ಗದ್ದಿಗೌಡರ ತಿಳಿಸಿದ್ದಾರೆ.
ದೇಶದ ರಕ್ಷಣಾ ವಿಷಯ, ಹೆದ್ದಾರಿಗಳ ನಿರ್ಮಾಣ ರೈಲು ಯೋಜನೆ, ರೈತರು, ಮಹಿಳೆಯರಿಗೆ ಹಾಗೂ ಹಿರಿಯ
ನಾಗರಿಕರಿಗೆ ಹೊಸ ಯೋಜನೆ ನೀಡಿದ್ದಾರೆ. ತೆರಿಗೆಯಲ್ಲಿಯೂ ಕೂಡ ಇಳಿಕೆ ಮಾಡಲಾಗಿದೆ.ಕೃಷಿ ಸಾಲಕ್ಕೆ ಹಣ ಮೀಸಲು, ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಇದೊಂದ ಬಡವರ , ರೈತಪರ,ಯುವಕರ, ಎಲ್ಲ ವರ್ಗದವರ ಪರವಾಗಿ ಬಜೆಟ್ ನ್ನು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ನೀಡಿದ್ದಾರೆ ಎಂದು ಸಂಸದರು ತಿಳಿಸಿದ್ದಾರೆ.