CINEMA| ಕನ್ನಡದ ಸ್ಟಾರ್ ಡೈರೆಕ್ಟರ್ ಜೊತೆ ಟಾಲಿವುಡ್‌ ನಟ ಗೋಪಿಚಂದ್ ಹೊಸ ಸಿನಿಮಾ ಲಾಂಚ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇತ್ತೀಚಿನ ದಿನಗಳಲ್ಲಿ ಒಂದು ಇಂಡಸ್ಟ್ರಿಯ ನಿರ್ದೇಶಕರು ಮತ್ತೊಂದು ಇಂಡಸ್ಟ್ರಿಯ ಹೀರೋಗಳೊಟ್ಟಿಗೆ ಸಿನಿಮಾ ನಿರ್ದೇಶನ ಮಾಡುವುದು ಕಾಮನ್.‌ ಪ್ರಭಾಸ್, ರಾಮ್ ಚರಣ್, ಎನ್ ಟಿಆರ್, ಧನುಷ್, ಶಿವಕಾರ್ತಿಕೇಯನ್ ಮುಂತಾದ ಹೀರೋಗಳು ಈ ಸಾಲಿನಲ್ಲಿದ್ದಾರೆ. ಮತ್ತೊಬ್ಬ ಟಾಲಿವುಡ್ ಹೀರೋ ಕೂಡ ಕನ್ನಡ ಇಂಡಸ್ಟ್ರಿ ಸ್ಟಾರ್ ಡೈರೆಕ್ಟರ್ ಜೊತೆ ಕೈ ಜೋಡಿಸಲಿದ್ದಾರೆ. ಮ್ಯಾಚೋ ಸ್ಟಾರ್ ಗೋಪಿಚಂದ್ ತಮ್ಮ 31 ನೇ ಚಿತ್ರವನ್ನು ಸ್ಯಾಂಡಲ್ ವುಡ್ ನಿರ್ದೇಶಕ ಹರ್ಷ ಅವರೊಂದಿಗೆ ಮಾಡಲಿದ್ದಾರೆ. ಇಂದು (ಮಾರ್ಚ್ 3) ಪೂಜೆ ಕಾರ್ಯಕ್ರಮಗಳೊಂದಿಗೆ ಸಿನಿಮಾ ಅಧಿಕೃತವಾಗಿ ಲಾಂಚ್ ಆಗಿದೆ.

ಕನ್ನಡದ ನಟ ಶಿವರಾಜ್ ಕುಮಾರ್ ಜೊತೆ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನಿರ್ದೇಶಿಸಿದ್ದ ಹರ್ಷ ಇತ್ತೀಚೆಗೆ ವೇದ ಚಿತ್ರದ ಮೂಲಕ ಸೂಪರ್ ಹಿಟ್ ಪಡೆದರು. ಇದೀಗ ಈ ಮಾಸ್ ಡೈರೆಕ್ಟರ್ ಗೋಪಿಚಂದ್ ಜೊತೆಯಾಗುತ್ತಿರುವ ಈ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಿಸಲಿದೆ. ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದರೆ, ಜಯ ಸ್ವಾಮಿ ಅವರ ಛಾಯಾಗ್ರಹಣವಿದೆ. ಈ ಹಿಂದೆ ಗೋಪಿಚಂದ್ ಪಂಥಂ ನಿರ್ಮಾಣ ಮಾಡಿದ್ದ ಶ್ರೀ ಸತ್ಯಸಾಯಿ ಆರ್ಟ್ಸ್ ಈ ಚಿತ್ರವನ್ನು ನಿರ್ಮಿಸಲಿದೆ. ಈ ತಿಂಗಳಲ್ಲೇ ಈ ಸಿನಿಮಾದ ರೆಗ್ಯುಲರ್ ಶೂಟಿಂಗ್ ಶುರುವಾಗಲಿದೆ ಎಂಬ ಮಾಹಿತಿಯೂ ಸಿಕ್ಕಿದೆ.

ಸದ್ಯದಲ್ಲೇ ಈ ಸಿನಿಮಾದಲ್ಲಿ ನಟಿಸಲಿರುವ ನಟರ ವಿವರಗಳನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು. ಈ ನಡುವೆ ಗೋಪಿಚಂದ್ ಸದ್ಯ ರಂಬಾಣಂ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ‘ಲಕ್ಷ್ಯಂ’, ‘ಲೌಕ್ಯಂ’ ನಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಶ್ರೀವಾಸ್ ಜೊತೆ ಗೋಪಿಚಂದ್ ಅಭಿನಯದ ಮೂರನೇ ಸಿನಿಮಾ ಇದಾಗಿದೆ. ಈ ಚಿತ್ರದ ಮೂಲಕ ನಿರ್ದೇಶಕ ಮತ್ತು ನಾಯಕ ಹ್ಯಾಟ್ರಿಕ್ ಗಳಿಸುವ ತವಕದಲ್ಲಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದಿಂದ ಮೊದಲ ಬಾಣದ ಝಲಕ್ ಬಿಡುಗಡೆಯಾಗಿದೆ. ಆ ಝಲಕ್‌ಗಳು ಸಿನಿಮಾದಲ್ಲಿ ಕುತೂಹಲ ಮೂಡಿಸಿದೆ. ಈ ಚಿತ್ರದಲ್ಲಿ ಗೋಪಿಚಂದ್‌ಗೆ ನಾಯಕಿಯಾಗಿ ಡಿಂಪಲ್ ಹಯಾತಿ ನಟಿಸುತ್ತಿದ್ದು, ಜಗಪತಿ ಬಾಬು ಮತ್ತು ಕುಶ್ಬೂ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!