ಹೊಸದಿಗಂತ ವರದಿ ವಿಜಯಪುರ:
ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರ ಚಾಕಲೇಟ್ ಕೊಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ರಾಜ್ಯ ಸರ್ಕಾರದ ವಾಗ್ದಾಳಿ ನಡೆಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿ ಎನ್ನುವುದು ಬರೀ ಸುಳ್ಳು. ಮೀಸಲಾತಿ ಯಾರು ಒಪ್ಪಲು ತಯಾರು ಇಲ್ಲ. ಸರ್ಕಾರ ತಪ್ಪು ದಾರಿ ಒಯ್ಯಲು ಕೆಲಸ ಮಾಡುತ್ತಿದೆ.
ಕಾನೂನು ಪ್ರಕಾರ ಆ ರೀತಿ ಮಾಡಲು ಬರಲ್ಲ. ಪಂಚಮಸಾಲಿ, ಒಕ್ಕಲಿಗರಿಗೆ ಎಷ್ಟು ಮೀಸಲಾತಿ ಕೊಡುತ್ತಾರೆ ಸರ್ಕಾರ ಹೇಳಬೇಕು. ಮೀಸಲಾತಿಯನ್ನು ನಾವು ಒಪ್ಪಿಕೊಳ್ಳಲ್ಲ ಎಂದರು.