ಸರ್ಕಾರ ಮಾಡಾಳ್ ವಿರೂಪಾಕ್ಷಪ್ಪ ರಕ್ಷಣೆ ಮಾಡ್ತಿದೆ: ಸಿದ್ದು ಆರೋಪ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಸರ್ಕಾರ ಮಾಡಾಳ್ ವಿರೂಪಾಕ್ಷಪ್ಪ ಅವರ ರಕ್ಷಣೆ ಮಾಡುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.

ಸರ್ಕಾರ ಏನು ಭ್ರಷ್ಟಾಚಾರ ಮಾಡಿದೆ ಲೆಕ್ಕ ಕೊಡಿ ಅನ್ನುತ್ತಿದ್ದವರಿಗೆ ಲಂಚ ಪಡೆಯುವಾಗೇ ಸಿಕ್ಕಿಬಿದ್ದ ಪ್ರಕರಣಗಳೇ ಸಾಕ್ಷಿ. ಮಾಡಾಳ್ ವಿರೂಪಾಕ್ಷಪ್ಪ ರಾಜೀನಾಮೆ ನೀಡೋಕೆ ಬಂದಾಗಲೇ ಅವರನ್ನು ಬಂಧಿಸಬೇಕಿತ್ತು. ಈಗಲೂ ಬೆಂಗಳೂರಿನಲ್ಲಿ ಹಾಯಾಗಿ ಓಡಾಡಿಕೊಂಡಿದ್ದಾರೆ.

ಇದು ಭ್ರಷ್ಟ ಸರ್ಕಾರ ಎಂದಿದ್ದಾರೆ. ಒಬ್ಬ ಶಾಸಕನ ಮನೆಯಲ್ಲಿ ಎಂಟು ಕೋಟಿ ರೂಪಾಯಿ ಹಣ ಪತ್ತೆಯಾಗುವುದು ಸಣ್ಣ ವಿಷಯ ಅಲ್ಲ. ಶಾಸಕನ ಬಳಿಯೇ ಇಷ್ಟು ಇರುವಾಗ ಬೇರೆಯವರ ಕತೆ ಏನು? ಸುಮ್ಮನೆ ೪೦% ಕಮಿಷನ್ ಸರ್ಕಾರ ಎಂದು ನಾವು ಹೇಳಿಲ್ಲ. ಈಗ ಸಾಕ್ಷಿ ನಿಮ್ಮ ಮುಂದೆಯೇ ಇದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!