ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಯುಧಪೂಜೆ ವೇಳೆ ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳಿಗೆ ಹಾಗೂ ವಾಹನಗಳಿಗೆ ಪೂಜೆ ಮಾಡುವ ವೇಳೆ ರಾಸಾಯನಿಕ ಇರುವಂಥ ಬಣ್ಣಗಳನ್ನು ಬಳಸುವಂತಿಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಈ ಕುರಿತು ಸುತ್ತೋಲೆ ಹೊರಡಿಸಿದ್ದು, ಇವು ಪಾರಂಪರಿಕ ಕಟ್ಟಡಗಳು, ಕಚೇರಿ,ಒಳಗೆ ಅಥವಾ ಕಾರಿಡಾರ್ಗಳಲ್ಲಿ ಕುಂಬಳಕಾಯಿ ಒಡೆಯುವಾಗ ಅದರಲ್ಲಿ ಬಣ್ಣ ಹಾಕಿ ಒಡೆಯುವಂತಿಲ್ಲ, ರಾಸಾಯನಿಕ ಇರುವ ಬಣ್ಣ ಬಳಕೆ ಬೇಡ ಎಂದಿದ್ದಾರೆ. ಕಚೇರಿಯ ಸೌಂದರ್ಯ ಕಾಪಾಡುವುದು ಎಲ್ಲರ ಕರ್ತವ್ಯವಾಗಿದ್ದು, ಇದಕ್ಕೆ ಧಕ್ಕೆಯಾಗುವಂಥ ಕಾರ್ಯ ಮಾಡುವಂತಿಲ್ಲ ಎನ್ನಲಾಗಿದೆ.