Thursday, March 30, 2023

Latest Posts

ಮಾ.10ರಂದು ಘಟಿಕೋತ್ಸವದಲ್ಲಿ ಡಾಕ್ಟರೇಟ್‌ ಪ್ರದಾನ ಮಾಡಲಿರುವ ರಾಜ್ಯಪಾಲ ಗೆಹ್ಲೋಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ಇದೇ ಮಾ. 10ರಂದು ನಡೆಯಲಿರುವ 3 ನೇ ಘಟಿಕೋತ್ಸವದಲ್ಲಿ ಗಾಂಧಿವಾದಿ ಬೆಳಗಾವಿಯ ಶಿವಾಜಿ ಕಾಗಣಿಕರ್ ಹಾಗೂ ಮೈಸೂರಿನ ಎ.ಪಿ.ಚಂದ್ರಶೇಖರ ಅವರಿಗೆ ರಾಜ್ಯಪಾಲ ಥಾವರಚೆಂದ್ ಗೆಹ್ಲೋಟ್ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಿದ್ದಾರೆ.

ಇಂಫಾಲಾ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಡಾ. ಸುಬ್ಬಣ್ಣ ಅಯ್ಯಪ್ಪನ ಘಟಿಕೋತ್ಸವದ ಭಾಷಣ ಮಾಡಲಿದ್ದಾರೆ ಎಂದು ಕುಲಪತಿ ವಿಷ್ಣುಕಾಂತ ಚಟಪಲ್ಲಿ ಹೇಳಿದರು.

ಈ ವೇಳೆ ಪ್ರೀತಂ ಸಿ.ಒ, ದಿವ್ಯಾ ಬಿ.ಯು,ಚಿದಾನಂದ ಅಶ್ಯಾಲ,ವೀಣಾ ಭಜಂತ್ರಿ,ಕೆ.ಆರ್.ಮೋಹನ,ಎಸ್. ತೇಜೇಶ,ಪ್ರಿಯಾ ನೀರಲಕಟ್ಟಿ,ಶೋಭಾ ಪೂಜಾರ,ಪೂಜಾ ಕಣವಿ,ಅಪ್ರೀನಸನಾ ಹಂಪಾಪಟ್ಟಣ ಅವರು ಬಂಗಾರದ ಪದಕ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕುಲಸಚಿವ ಪ್ರೊ. ಬಸವರಾಜ ಲಕ್ಕಣ್ಣವರ, ವಸಂತ ಮದ್ಲೂರ ಸೇರಿದಂತೆ ಮುಂತಾದವರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!