ಹೊಸದಿಗಂತ ಡಿಜಿಟಲ್ ಡೆಸ್ಕ್:
ಅನ್ನಮಯ್ಯ ಜಿಲ್ಲೆಯಲ್ಲಿ ಗನ್ ಫೈರಿಂಗ್ ಸಂಚಲನ ಮೂಡಿಸಿದೆ. ಪೀಲೇರು ಮಂಡಲದ ಮುಳ್ಳಗುರಿಪಲ್ಲಿಯಲ್ಲಿ ವೈಸಿಪಿ ಮುಖಂಡ ತಡರಾತ್ರಿ ಮಲ್ಲಿಕಾರ್ಜುನ ಮೇಲೆ ದುಷ್ಕರ್ಮಿ ಗುಂಡು ಹಾರಿಸಿದ್ದಾನೆ. ಈ ಗುಂಡಿನ ದಾಳಿಯಲ್ಲಿ ಮಲ್ಲಿಕಾರ್ಜುನ ಅವರ ಕಾಲಿಗೆ ಗಾಯವಾಗಿದ್ದು, ಗಾಯಾಳುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಘಟನಾ ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಸಂತ್ರಸ್ತನಿಂದ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ ಶೂಟರ್ ಯಾರು? ಆತ ಗುಂಡು ಹಾರಿಸಿದ್ಯಾಕೆ?ಆರೋಪಿಗೆ ಗನ್ ಎಲ್ಲಿಂದ ಬಂತು? ಈ ನಿಟ್ಟಿನಲ್ಲಿ ತನಿಖೆ ನಡೆಸಲಾಗುತ್ತಿದೆ. ಈ ಘಟನೆ ಸ್ಥಳದಲ್ಲಿ ಆತಂಕ ಸೃಷ್ಟಿ ಮಾಡಿದೆ.