ಹೊಸದಿಗಂತ ಡಿಜಿಟಲ್ ಡೆಸ್ಕ್
ಜ್ಞಾನವಾಪಿ ಮಸೀದಿ ಕುರಿತಾದ ತನ್ನ ಮುಂದಿನ ಆದೇಶ ಪ್ರಕಟವಾಗುವವರೆಗೆ ‘ಶಿವಲಿಂಗ’ದ ರಕ್ಷಣಾ ವ್ಯವಸ್ಥೆಯನ್ನು ಮುಂದುವರೆಸುವಂತೆ ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ಸುಪ್ರಿಂ ಕೋರ್ಟ್ ಶುಕ್ರವಾರ ನಿರ್ದೇಶಿಸಿದೆ. ವಾರಣಾಸಿಯ ಮಸೀದಿ ಸಂಕೀರ್ಣದಲ್ಲಿ ಪತ್ತೆಯಾದ ‘ಶಿವಲಿಂಗ’ದ ರಕ್ಷಣೆ ಕೋರಿ ಸಲ್ಲಿಸಲಾದ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.
ಸಿಜೆಐ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಜೆಬಿ ಪರ್ದಿವಾಲಾ ಅವರ ಪೀಠವು ಈ ಪ್ರಕರಣದ ವಿಚಾರಣೆಗೆ ಪೀಠವನ್ನು ರಚಿಸುವುದಾಗಿ ಗುರುವಾರ ಹೇಳಿತ್ತು.
ಮೇ 17 ರಂದು, ಸುಪ್ರೀಂ ಕೋರ್ಟ್, ಮಧ್ಯಂತರ ಆದೇಶದ ಮೂಲಕ, ‘ಶಿವಲಿಂಗ’ ಪತ್ತೆಯಾದ ಪ್ರದೇಶದ ರಕ್ಷಣೆಗೆ ನಿರ್ದೇಶನ ನೀಡಿತ್ತು. ಹಾಗೂ ನಮಾಜ್ಗಾಗಿ ಮುಸ್ಲಿಮರಿಗೆ ಪ್ರವೇಶವನ್ನು ನೀಡಿತು. ವಾರಣಾಸಿ ನ್ಯಾಯಾಲಯವು ದಾವೆಯ ತೀರ್ಪು ಪ್ರಕಟಿಸುವವರೆಗೆ ಇದೇ ಆದೇಶ ಪಾಲನೆಯಾಗಲಿ ಎಂದು ನ್ಯಾಯಾಲಯ ಹೇಳಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ