ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಸರ್ಗೆ ಬೇಲ್ ಸಿಕ್ಕಿರೋದು ಖುಷಿಯಿದೆ ಎಂದು ಸ್ಯಾಂಡಲ್ವುಡ್ ನಟಿ ರಚಿತಾ ರಾಮ್ ಹೇಳಿದ್ದಾರೆ.
ನಾನು ದರ್ಶನ್ ಸರ್ ಬಗ್ಗೆ ಹೇಳುತ್ತಲೇ ಇರುತ್ತೇನೆ. ಇಂಡಸ್ಟ್ರಿಯಲ್ಲಿ ಇರೋವರೆಗೂ ಇಂಡಸ್ಟ್ರಿ ಬಿಟ್ಟ ಮೇಲೆಯೂ ಅವರ ಬಗ್ಗೆ ಹೇಳಬೇಕಾಗುತ್ತದೆ. ಯಾಕೆಂದರೆ ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ ವ್ಯಕ್ತಿ. ತೂಗುದೀಪ ಬ್ಯಾನರ್ ನನ್ನ ಪರಿಚಯಿಸಿರೋದು. ಬುಲ್ ಬುಲ್ ತಂಡ ನನ್ನ ಪರಿಚಯಿಸಿದ್ದು, ಹಾಗಾಗಿ ನಾನು ಮತ್ತು ನನ್ನ ಕುಟುಂಬ ಅವರಿಗೆ ಆಭಾರಿಯಾಗಿರುತ್ತೇವೆ ಎಂದು ರಚಿತಾ ರಾಮ್ ಹೇಳಿದರು.
ದರ್ಶನ್ ಸರ್ಗೆ ರೆಗ್ಯೂಲರ್ ಬೇಲ್ ಆಗಿರೋದು ಖುಷಿಯಿದೆ. ಅವರಿಗೆ ಸ್ವಲ್ಪ ಸಮಯ ಕೊಡೋಣ. ಇದರ ಬಗ್ಗೆ ಅವರು ಮಾತನಾಡಿದರೆ ಸರಿಯಾಗಿರುತ್ತದೆ. ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರು ಆದಷ್ಟು ಕಮ್ ಬ್ಯಾಕ್ ಮಾಡಲಿ, ಈ ಬಗ್ಗೆ ಅವರೇ ಮಾತನಾಡಿದರೆ ಚೆಂದ ಎಂದು ಹೇಳಿದ್ದಾರೆ.
ಕೊಲೆಗಾರನನ್ನು ಬೆಂಬಲಿಸುವುದು ಕೊಲೆಮಾಡಿದಷ್ಟೆ ಪಾಪ ಎಂದು ಈ ರೀತಿಯ ವ್ಯಕ್ತಿಗಳಿಗೆ ಯಾವಾಗ ತಿಳಿಯುವುದು?