ಟಿ20 ತಂಡಕ್ಕೆ ಹಾರ್ದಿಕ್​ ಪಾಂಡ್ಯ ನಾಯಕನಾಗಲಿ: ರವಿಶಾಸ್ತ್ರಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಟಿ20 ಮಾದರಿಗೆ ಪ್ರತ್ಯೇಕ ನಾಯಕನ ಅಗತ್ಯದ ಬಗ್ಗೆ ಹೇಳಿದ್ದ ಮಾಜಿ ಆಟಗಾರ ವಿವಿಎಸ್​ ಲಕ್ಷ್ಮಣ್​ ಸಲಹೆಯನ್ನು ಭಾರತ ತಂಡದ ಮಾಜಿ ತರಬೇತುದಾರ ರವಿಶಾಸ್ತ್ರಿ ಅನುಮೋದಿಸಿದ್ದಾರೆ.

ತಂಡದ ಬಲವರ್ಧನೆಗೆ ನಾಯಕನ ಬದಲು ಮಾಡಬಹುದು. ಹಾರ್ದಿಕ್ ​ಪಾಂಡ್ಯ ನಾಯಕನ ಸ್ಥಾನ ತುಂಬುವಲ್ಲಿ ಸಮರ್ಥ ಎಂದು ಹೇಳಿದ್ದಾರೆ.

ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ಟಿ20ಗೆ ಪ್ರತ್ಯೇಕ ನಾಯಕನ ನೇಮಕದಿಂದ ಯಾವುದೇ ಹಾನಿಯಾಗುವುದಿಲ್ಲ. ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಇದಕ್ಕೆ ಸೂಕ್ತ ಆಟಗಾರ. ನಾಯಕನ ಬದಲಿ ತಂಡವನ್ನು ಬಲಪಡಿಸಲಿದೆ. ಮೂರು ಪ್ರಕಾರದ ಕ್ರಿಕೆಟ್​ ಅನ್ನು ಒಬ್ಬ ನಾಯಕ ನಿಭಾಯಿಸುವುದು ಕಷ್ಟ. ರೋಹಿತ್ ಶರ್ಮಾ ಟೆಸ್ಟ್ ಮತ್ತು ಏಕದಿನದ ನೇತೃತ್ವ ವಹಿಸಿಕೊಂಡರೆ, ಟಿ20 ಮಾದರಿಗೆ ಹೊಸ ನಾಯಕನ ನೇಮಕ ಮಾಡುವುದು ಉತ್ತಮ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!