ಹಿಂದೂಗಳ ಭಾವನೆಗೆ ಧಕ್ಕೆ: ನಟ ಅಜಯ್​ ದೇವಗನ್​, ಸಿದ್ಧಾರ್ಥ್​ ಮಲ್ಹೋತ್ರ ವಿರುದ್ಧ ದೂರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟ ಅಜಯ್ ದೇವಗನ್ ಹಾಗೂ ಸಿದ್ಧಾರ್ಥ್​ ಮಲ್ಹೋತ್ರ ಹಿಂದೂಗಳ ಭಾವನೆಗೆ ಧಕ್ಕೆ ತಂದ ಆರೋಪಕ್ಕೆ ಗುರಿಯಾಗಿದ್ದು, ಅವರ ವಿರುದ್ಧ ಪೊಲೀಸರಿಗೆ ದೂರು ದಾಖಲಾಗಿದೆ.

ಅಜಯ್​ ದೇವಗನ್ ಮತ್ತು ಸಿದ್ಧಾರ್ಥ್​ ಮಲ್ಹೋತ್ರ ಅಭಿನಯದ ನೂತನ ಸಿನಿಮಾ ‘ಥ್ಯಾಂಕ್​ ಗಾಡ್​’ನಲ್ಲಿ ಇವರು ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪದ ಮೇಲೆ ಪೊಲೀಸರಿಗೆ ದೂರು ನೀಡಲಾಗಿದೆ. ಮಾತ್ರವಲ್ಲ, ನಿರ್ಮಾಣ ಸಂಸ್ಥೆಯಾದ ಟಿ-ಸೀರಿಸ್ ವಿರುದ್ಧವೂ ದೂರು ನೀಡಲಾಗಿದೆ.

ಸಿನಿಮಾದಲ್ಲಿ ಪುರಾಣ ಪುರುಷ ಚಿತ್ರಗುಪ್ತನ ಅಸಭ್ಯವಾಗಿ ಬಿಂಬಿಸಲಾಗಿದೆ. ಚಿತ್ರಗುಪ್ತನನ್ನು ಆಧುನಿಕ ಉಡುಪಿನಲ್ಲಿ ತೋರಿಸಿರುವುದಷ್ಟೇ ಅಲ್ಲದೆ, ಆತನನ್ನು ಅರೆಬೆತ್ತಲೆ ಮಹಿಳೆಯರು ಸುತ್ತುವರಿದಿರುವಂತೆ ಕೂಡ ಚಿತ್ರೀಕರಿಸಿರುವುದು ಟ್ರೇಲರ್​ನಲ್ಲಿ ಕಂಡುಬಂದಿದೆ ಎಂಬುದಾಗಿ ಕಾಯಸ್ಥ ಸಮಾಜದ ಪ್ರತಿನಿಧಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.

ಚಿತ್ರಗುಪ್ತರನ್ನು ಅಸಭ್ಯವಾಗಿ ಚಿತ್ರಿಸಿರುವುದು ಧಾರ್ಮಿಕ ಭಾವನೆಗೆ ನೋವುಂಟು ಮಾಡಿರುವುದಷ್ಟೇ ಅಲ್ಲದೆ, ಸಾಮಾಜಿಕ ಸಾಮರಸ್ಯವನ್ನು ಕೆಡಿಸುವಂಥದ್ದು. ಹೀಗಾಗಿ ಈ ದೃಶ್ಯಗಳನ್ನು ಸಿನಿಮಾದಿಂದ ತೆಗೆದು ಹಾಕಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!