ಶಿವಮೊಗ್ಗದಲ್ಲಿ ಬಂಧಿತರಿಂದ ಮತ್ತಷ್ಟು ಮಾಹಿತಿ ಬಹಿರಂಗ: ಜಿಹಾದ್ ಕೆಲಸಕ್ಕೆ ಸ್ಫೋಟಕಗಳ ತಯಾರಿ!

ಹೊಸದಿಗಂತ ವರದಿ, ಶಿವಮೊಗ್ಗ:

ಶಿವಮೊಗ್ಗದಲ್ಲಿ ಇತ್ತೀಚೆಗೆ ಸಿಕ್ಕಿಬಿದ್ದಿರುವ ಶಂಕಿತ ಭಯೋತ್ಪಾದನಾ ಸಂಘಟನೆ ಜೊತೆ ನಂಟು ಹೊಂದಿದ್ದ ಆರೋಪಿಗಳು ಜಿಹಾದ್ ಕೆಲಸಕ್ಕಾಗಿ ಸ್ಫೋಟಕಗಳನ್ನು ಸಿದ್ಧಪಡಿಸುತ್ತಿದ್ದರು ಎಂಬುದು ಪೊಲೀಸ್ ತನಿಖೆ ವೇಳೆ ಬಹಿರಂಗಗೊಂಡಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಈ ಕುರಿತು ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.

ಐಸಿಸ್‌ನ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಆರೋಪಿಗಳು ಬಯಸಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಲಭಿಸಿರುವುದು ಕೇವಲ ಬ್ರಿಟೀಷರಿಂದ ಮಾತ್ರ. ನಮಗೆ ನಿಜವಾದ ಸ್ವಾತಂತ್ರ್ಯ ಸಿಗಬೇಕಾದರೆ ಭಾರತದ ವ್ಯವಸ್ಥೆ ವಿರುದ್ಧ ಯುದ್ಧ ಸಾರಬೇಕು. ಷರಿಯಾ ಕಾನೂನು ಜಾರಿಗೆ ತರಬೇಕು ಎಂದು ಇವರು ಬಯಸಿದ್ದರು ಎಂದು ತಿಳಿಸಿದರು.

ಈ ವಿಚಾರಧಾರೆಗೆ ಅನುಗುಣವಾಗಿ ಐಸಿಸ್ ಕಾರ್ಯ ನಿರ್ವಹಿಸುತ್ತಿದೆ. ಇಸ್ಲಾಂ ಧರ್ಮವನ್ನು ಉನ್ನತಿಗೇರಿಸುವ ಸಲುವಾಗಿ ಜಿಹಾದ್ ಮೂಲಕ ಖಾಫಿರ್‌ಗಳ ವಿರುದ್ಧ ಯುದ್ಧ ಸಾರುವುದು ಇವರ ಬಹುಮುಖ್ಯ ಉದ್ದೇಶ. ಜಿಹಾದ್ ಕೆಲಸಕ್ಕಾಗಿ ಸ್ಫೋಟಕಗಳ ತಯಾರಿಕೆಯನ್ನು ಇವರುಗಳು ನಡೆಸಿದ್ದರು. ಇವರು ಗೋವಾ ಮತ್ತು ಬಾಂಬೆಗೆ ಹೋಗಿ ಬಂದಿದ್ದಾರೆ. ಬೇರೆ ಕಡೆ ಹೋದ ವಿವರಗಳು ಇನ್ನೂ ಸಿಕ್ಕಿಲ್ಲ. ಪಾಕಿಸ್ಥಾನಕ್ಕೆ ಹೋಗಿರುವ ಮಾಹಿತಿ ಇಲ್ಲ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!