ಹಾರವಾಡ ರೈಲ್ವೆ ನಿಲ್ದಾಣದ ಸಮೀಪ ರೈಲು ಬಡಿದು ವ್ಯಕ್ತಿ ಸಾವು

ಹೊಸ ದಿಗಂತ ವರದಿ, ಅಂಕೋಲಾ:

ರೈಲು ಬಡಿದು ವ್ಯಕ್ತಿಯೋರ್ವ ಮೃತ ಪಟ್ಟ ಘಟನೆ ತಾಲೂಕಿನ ಹಾರವಾಡ ರೈಲ್ವೆ ನಿಲ್ದಾಣದ ಸಮೀಪದ ಸುರಂಗ ಮಾರ್ಗದ ಬಳಿ ಸಂಭವಿಸಿದೆ.

ಹಾರವಾಡ ಒಕ್ಕಲಕೇರಿ ನಿವಾಸಿ ಕೂಲಿ ಕಾರ್ಮಿಕ ಮನೋಹರ ಗಣಪತಿ ಗೌಡ(36) ಮೃತ ವ್ಯಕ್ತಿಯಾಗಿದ್ದು ರೈಲು ಬಡಿದ ಪರಿಣಾಮ ಅಂಗಾಂಗಳು ತುಂಡಾಗಿರುವ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿದೆ.

ಕುಟುಂಬದ ಜನ ಶುಭ ಕಾರ್ಯಕ್ಕೆ ತೆರಳಿದ ಸಂದರ್ಭದಲ್ಲಿ ಘಟನೆ ಸಂಭವಿಸಿದ್ದು ಸಾವು ಆಕಸ್ಮಿಕ ಅಪಘಾತವೋ ಆತ್ಮಹತ್ಯೆಯೋ ಎನ್ನುವ ಕುರಿತು ಮಾಹಿತಿ ತಿಳಿದು ಬರಬೇಕಿದೆ.

ಪಿ.ಎಸ್. ಐ ಕುಮಾರ ಕಾಂಬಳೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ್ ನಾಯ್ಕ ಮತ್ತು ಸ್ಥಳೀಯರು ಅತ್ಯಂತ ದುರ್ಗಮ ಸ್ಥಳದಿಂದ ಮೃತ ದೇಹ ಎತ್ತಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲು ನೆರವಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!