ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಲಾಸ್ಪುರದ ಉದ್ಯಮಿಯೊಬ್ಬರಿಗೆ ಬೆದರಿಕೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಮೂವರು ಆರೋಪಿಗಳನ್ನು ಹರಿಯಾಣ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಇಪ್ಪತ್ತು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದು, ಉದ್ಯಮಿಯ ವಾಟ್ಸಾಪ್ಗೆ ವಿದೇಶಿ ಸಂಖ್ಯೆಯಿಂದ ಕರೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಸೆಪ್ಟೆಂಬರ್ 19 ರಂದು ಬಿಲಾಸ್ಪುರದ ಉದ್ಯಮಿಯೊಬ್ಬರಿಂದ 20 ಲಕ್ಷ ಸುಲಿಗೆಗೆ ಬೇಡಿಕೆಯಿತ್ತು, ಅವರ ಮನೆಗೆ ಬೆದರಿಕೆ ಪತ್ರವನ್ನು ತಲುಪಿಸಲಾಯಿತು. ಅಷ್ಟೇ ಅಲ್ಲದೆ ಅವರ ವಾಟ್ಸಾಪ್ಗೆ ವಿದೇಶಿ ಸಂಖ್ಯೆಯಿಂದ ಕರೆಯೂ ಬಂದಿರುವುದಾಗಿ ಯಮುನಾನಗರದ ಪೊಲೀಸ್ ಅಧೀಕ್ಷಕ (ಎಸ್ಪಿ) ಮೋಹಿತ್ ಹಂಡಾ ಹೇಳಿದರು.
ಹಣವನ್ನು ನಾವು ಹೇಳುವ ಸ್ಥಳಕ್ಕೆ ತಲುಪಿಸುವಂತೆ ಬೆದರಿಕೆ ಹಾಕಿದರು. ಈ ವೇಳೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ಗುರುತಿಸಿದ್ದು, ಜೊತೆಗೆ ಅವರಲ್ಲಿ ಮೂವರನ್ನು ಬಂಧಿಸಿ ಅವರಿಂದ ಮೂವತ್ತು ಲಕ್ಷ ರೂಪಾಯಿ ಹಣ ವಶಪಡಿಸಿಕೊಂಡಿರುವುದಾಗಿ ಹಂಡಾ ತಿಳಿಸಿದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದರು.