ಪೊಲೀಸ್ ವರ್ಸಸ್ ಪೊಲೀಸ್- ಬಿಜೆಪಿ ನೇತಾರ ತೇಜಿಂದರ್ ಬಗ್ಗಾ ಹೊತ್ತೊಯ್ದ ಪ್ರಕರಣಕ್ಕೆ ತಿರುವು

ಹೊಸದಿಗಂತ ಡಿಜಿಟಲ್ ಡೆಸ್ಕ್

ತೇಜಿಂದರ್ ಬಗ್ಗಾ ದೆಹಲಿಯಲ್ಲಿ ವಾಸಿಸುವ ಬಿಜೆಪಿ ಮುಖಂಡ. ಅವರು ದೆಹಲಿ ಮುಖ್ಯಮಂತ್ರಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪದ ಮೇಲೆ ಇಂದು ಪಂಜಾಬ್ ಪೊಲೀಸರು ಅವರನ್ನು ದೆಹಲಿಗೆ ಬಂದು ಕರೆದೊಯ್ದದದ್ದು ರಾಜಕೀಯ ಪ್ರೇರಿತ ಎಂಬುದು ಯಾರಿಗಾದರೂ ತಿಳಿಯುವಂತಿತ್ತು. ಏಕೆಂದರೆ ದೆಹಲಿ ಮುಖ್ಯಮಂತ್ರಿ ಮೇಲೆ ದೆಹಲಿ ನಿವಾಸಿಯೊಬ್ಬ ಮಾಡಿದ ಟೀಕೆಗೆ ಪಂಜಾಬ್ ಪೊಲಿಸರಿಗೇನು ಕೆಲಸ? ಪಂಜಾಬಿನಲ್ಲಿ ಆಪ್ ಸರ್ಕಾರವಿದೆ ಎಂಬ ಒಂದೇ ಕಾರಣಕ್ಕೆ ಅಲ್ಲಿನ ಪೊಲೀಸ್ ಪಡೆಯನ್ನು ರಾಜಕೀಯವಾಗಿ ಬಳಸಿಕೊಂಡಿರುವುದು ಸ್ಪಷ್ಟವಾಗಿತ್ತು.

ಇದಕ್ಕೀಗ ರಾಜಕೀಯ ರೀತಿಯಲ್ಲೇ ಪ್ರತಿಕ್ರಿಯೆ ಎದುರಾಗಿದೆ. ಒಂದು ಕಡೆ ಕೇಂದ್ರದ ಅಧೀನದಲ್ಲಿರುವ ದೆಹಲಿ ಪೊಲೀಸರು ಅಪಹರಣ ಪ್ರಕರಣವನ್ನು ದಾಖಲಿಸಿದರೆ, ಇನ್ನೊಂದೆಡೆ ಬಿಜೆಪಿ ಆಡಳಿತದ ಹರ್ಯಾಣ ಪೊಲೀಸರು ಬಗ್ಗಾ ಅವರನ್ನು ಕರೆದೊಯ್ಯುತ್ತಿದ್ದ ಪಂಜಾಬ್ ಪೊಲೀಸ್ ವಾಹನವನ್ನು ಕುರುಕ್ಷೇತ್ರದಲ್ಲಿ ತಡೆದು ನಿಲ್ಲಿಸಿದ್ದಾರೆ. ಈ ಮೂಲಕ ಹರಿಯಾಣ ಪೊಲೀಸರು ತೇಜಿಂದರ್‌ ಪಾಲ್‌ ಸಿಂಗ್‌ ಬಗ್ಗಾ ಅವರನ್ನು ಮತ್ತೆ ವಾಪಸ್‌ ದೆಹಲಿಗೆ ಕರೆತರುತ್ತಾರೆ ಎಂದು ನಿರೀಕ್ಷಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!