ಕರ್ನಾಟಕ ಜೂನಿಯರ್ ಹಾಕಿ ತಂಡಕ್ಕೆ ಮಡಿಕೇರಿಯ ಮೂವರು ವಿದ್ಯಾರ್ಥಿಗಳು ಆಯ್ಕೆ

ಹೊಸದಿಗಂತ ವರದಿ, ಮಡಿಕೇರಿ
ಗೋವಾದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸಬ್ ಜೂನಿಯರ್ ಹಾಕಿ ಪಂದ್ಯಾವಳಿಯಲ್ಲಿ ರಾಜ್ಯ ತಂಡಕ್ಕೆ ಮಡಿಕೇರಿಯ ನಾಪೋಕ್ಲುವಿನ ಮೂರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ನಾಪೋಕ್ಲುವಿನ ಬಿದ್ದಾಟಂಡ ಜಿನ್ನು ನಾಣಯ್ಯ ಹಾಗೂ ನಂದಿನಿ ದಂಪತಿಯ ಪುತ್ರ ಅಖಿಲ್ ಅಯ್ಯಪ್ಪ, ಕುಲ್ಲೇಟಿರ ಅರುಣ್ ಬೇಬ ಹಾಗೂ ಹೇಮಾವತಿ ದಂಪತಿಯ ಪುತ್ರ ವಚನ್ ಕಾಳಪ್ಪ ಹಾಗೂ ಬಿದ್ದಾಟಂಡ ಹರ್ಷ ನಾಣಯ್ಯ ಹಾಗೂ ಸ್ವರ್ಣ ದಂಪತಿಯ ಪುತ್ರ ಬೋಪಣ್ಣ ರಾಜ್ಯತಂಡಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು.
ಅಖಿಲ್ ಅಯ್ಯಪ್ಪ, ವಚನ್ ಕಾಳಪ್ಪ ಅವರು ಪೊನ್ನಂಪೇಟೆ ಸೈಂಟ್ ಆನ್ಸ್ ಶಾಲೆಯ ವಿದ್ಯಾರ್ಥಿಗಳಾಗಿದ್ದು, ಬೋಪಣ್ಣ, ಕೂಡಿಗೆಯ ಡಿವೈಎಸ್‌ಎಸ್ ಶಾಲೆಯ ವಿದ್ಯಾರ್ಥಿಯಾಗಿದ್ದಾರೆ.
ಕುಲ್ಲೇಟಿರ ವಚನ್ ಕಾಳಪ್ಪ ತಂಡದ ಉಪನಾಯಕನಾಗಿರುವುದು ವಿಶೇಷ. ಪಂದ್ಯಾವಳಿಯು ಮೇ 4ರಿಂದ ಪ್ರಾರಂಭವಾಗಿದ್ದು, 15ರವರೆಗೆ ನಡೆಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!