ಇದೀಗ ಇದ್ದಕ್ಕಿದ್ದಂತೆಯೇ ವಾತಾವರಣ ಬದಲಾಗಿದೆ, ಮಕ್ಕಳಿಗೆ ಕೆಮ್ಮು, ಶೀತ, ಜ್ವರ ಬಾಧಿಸುತ್ತಿದೆ. ಮಳೆಗಾಲದಲ್ಲಿ ಯಾವುದೇ ಸಮಸ್ಯೆ ಬಾಧಿಸಬಾದರು ಎಂದಾದರೆ ಈ ಆಹಾರ ಪದಾರ್ಥಗಳನ್ನು ಸೇವಿಸಿ..
- ಎಳನೀರು, ಇದರಲ್ಲಿ ಎಲೆಕ್ಟ್ರೋಲೈಟ್ ಅಂಶ ಹೆಚ್ಚಾಗಿದ್ದು, ಜ್ವರ, ವಾಂತಿಯಂತಹ ಸಮಸ್ಯೆಗಳಿಗೆ ಪರಿಹಾರವಾಗಲಿದೆ.
- ಬಿಸಿ ಬಿಸಿಯಾಗಿ ಶುಂಠಿ, ಏಲಕ್ಕಿ ಮಿಶ್ರಿತ ಟೀ ಕುಡಿಯುವುದರಿಂದ ಶೀತ, ಕೆಮ್ಮು ಕಡಿಮೆಯಾಗುತ್ತೆ.
- ಕೆಮ್ಮಿನಿಂದ ಬಳಲುತ್ತಿರುವವರಿಗೆ ಜೇನುತುಪ್ಪ ಅತ್ಯುತ್ತಮ ಔಷಧವಾಗಲಿದೆ.
- ಹೊಟ್ಟೆ ಉಬ್ಬರ, ಹೊಟ್ಟೆ ನೋವು ಇದ್ದರೆ ಖಾರ ಸೇವಿಸಬೇಡಿ. ಇಲ್ಲವಾದರೆ ಕ್ಯಾಪ್ಸಿಕಂ ಸೇರಿದಂತೆ ಇರತೆ ಸ್ಪೈಸಿ ಆಹಾರ ಸೇವಿಸಿ.
- ಬಾಳೆ ಹಣ್ಣು, ಇದರಲ್ಲಿ ಹೆಚ್ಚು ನ್ಯೂಟ್ರಿಯಂಟ್ಸ್ ಹಾಗೂ ಎಲೆಕ್ಟ್ರೋಲೈಟ್ಸ್ ಅಂಶಗಳಿದ್ದು, ದೇಶಕ್ಕೆ ಶಕ್ತಿ ನೀಡುತ್ತದೆ.
- ಜೀರ್ಣಕ್ರಿಯೆ ಸಮಸ್ಯೆ, ವಾಂತಿಯಂತಹ ಸಮಸ್ಯೆ ಇದ್ದರೆ ಮೊಸರನ್ನ ಸೇವಿಸೋದು ಉತ್ತಮ.
- ಅವಕಾಡೊ, ಇದರಲ್ಲಿ ನಾರಿನಾಂಶ, ವಿಟಮಿನ್ಸ್, ಮಿನರಲ್ಸ್ ಇದ್ದು, ಇಮ್ಯುನಿಟಿ ಹೆಚ್ಚಿಸುತ್ತದೆ.
- ಹಾಲಿಗೆ ಅರಿಶಿಣ, ಕಾಳುಮೆಣಸಿನ ಪುಡಿ, ಜೇನುತುಪ್ಪ ಹಾಕಿ ಕುದಿಸಿ ಕುಡಿಯುವುದರಿಂದ ಕೆಮ್ಮು, ಶೀತ ಕಡಿಮೆಯಾಗುತ್ತೆ.