ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲವೊಮ್ಮೆ ಸಣ್ಣ ವಿಚಾರಗಳು ಅತಿರೇಕಕ್ಕೆ ತಲುಪಿ ದೊಡ್ಡ ಅನಾಹುತಗಳಿಗೆ ಎಡೆಮಾಡಿಕೊಡುತ್ತವೆ. ಅದರಂತೆ ಚಪಾತಿ ವಿಚಾರಕ್ಕೆ ಪತಿ ತನ್ನ ಪತ್ನಿ ಕರ್ಣಭೇರಿ(ತಮಟೆ)ಗೆ ಹಾನಿ ಮಾಡಿದ್ದಾನೆ. ಮಹಾರಾಷ್ಟ್ರದ ಬದ್ಲಾಪುರದ ಪೂರ್ವದಲ್ಲಿರುವ ಶಿರ್ಗಾಂವ್ನ ಮೌಲಿಚೌಕ್ನಲ್ಲಿರುವ ಮನೆಯಲ್ಲಿ ನಡೆದ ಘಟನೆಯೂ ಇದೇ ರೀತಿಯದ್ದಾಗಿದೆ. ನಿಕುಂಭ್ ಮನೆಯಲ್ಲಿ ತನ್ನ ಪತ್ನಿ ಅವರ ಹೆತ್ತವರೊಂದಿಗೆ ವಾಸ ಮಾಡುತ್ತಿದ್ದಾರೆ. ಒಂದೇ ಮನೆಯಲ್ಲಿ ಅತ್ತೆ-ಸೊಸೆ ಇದ್ದರೆ ಜಗಳ ಸಾಮಾನ್ಯ. ಹಲವು ಬಾರಿ ಗಲಾಟೆ ಸರಿಮಾಡಿದ್ದ ನಿಕುಂಭ್ ಈ ಬಾರಿ ತಾಳ್ಮೆ ಕಳೆದುಕೊಂಡಿದ್ದಾರೆ.
ಕಳೆದ ರಾತ್ರಿ ನಿಕುಂಭ್ ಪತ್ನಿ ಕೋಮಲ್ ಅಡುಗೆ ಮನೆಯಲ್ಲಿ ಊಟ ತಯಾರಿಸಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ಅವರ ಅತ್ತೆ ಚಪಾತಿ ಚೆನ್ನಾಗಿ ಮಾಡೋಕೆ ಬರುತ್ತಾ ಅಂತ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಸೊಸೆ ಹಾ..ಚೆನ್ನಾಗಿಯೇ ಮಾಡುತ್ತೇನೆ ಎಂದು ವ್ಯಂಗ್ಯವಾಗಿ ಉತ್ತರ ನೀಡಿದ್ದಾಳೆ. ಇದರಿಂದ ಕೋಪಗೊಂಡ ಅತ್ತೆ ನನಗೇ ವ್ಯಂಗ್ಯವಾಗಿ ಉತ್ತರ ಕೊಡುತ್ತೀಯಾ ಎಂದು ಮತ್ತೆ ಜಗಳ ಶುರುಮಾಡಿದ್ದಾರೆ. ಇವರ ಜಗಳ ಶಮನ ಮಾಡಲು ನಿಕುಂಭ್ ಪ್ರಯತ್ನಿಸಿದ ಎಲ್ಲಾ ಪ್ರಯತ್ನಗಳು ವ್ಯರ್ಥವಾಗಿವೆ.
ತಾಳ್ಮೆ ಕಳೆದುಕೊಂಡ ಪತಿ ಪತ್ನಿ ಕೋಮಲ್ ಕೆನ್ನೆಗೆ ಬಲವಾಗಿ ಕಲ್ಲಿನಿಂದ ಹೊಡೆದಿದ್ದಾನೆ. ಅಷ್ಟೇ..ಕೋಮಲ್ ತಮಟೆ ಒಡೆದುಹೋಗಿದೆ. ಅಷ್ಟಕ್ಕೇ ನಿಲ್ಲಿಸದೆ ಬೆಲ್ಟ್ನಿಂದ ಹಿಗ್ಗಾಮುಗ್ಗ ಥಳಿಸಿದ್ದಾನೆ. ಅಳುತ್ತಲೇ ಪೊಲೀಸ್ ಠಾಣೆಗೆ ತೆರಳಿದ ಕೋಮಲ್, ಪತಿ ಮಾಡಿದ ಘನಕಾರ್ಯದ ಬಗ್ಗೆ ಪೊಲೀಸರಿಗೆ ವಿವರಿಸಿ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.