ಹೊಸದಿಗಂತ ವರದಿ ಶಿರಸಿ:
ಬೈಕ್ ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಬನವಾಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಇಲ್ಲಿನ ದಾಸನಕೊಪ್ಪ ರಸ್ತೆಯ ಭೂತೇಶ್ವರ ಗುಡಿಯ ಬಳಿ ಈ ಅಪಘಾತ ಸಂಭವಿಸಿದ್ದು ಡಿಕ್ಕಿಯ ರಭಸಕ್ಕೆ ಬೈಕ್ ಸವಾರನ ಕಾಲಿಗೆ ಗಂಭೀರ ಸ್ವರೂಪದ ಗಾಯವಾಗಿದೆ. ಗಾಯಳುವನ್ನು ಕೂಡಲೇ ಬನವಾಸಿ ಪೊಲೀಸರು ಶಿರಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದನ್ನೂ ಓದಿ:
ಗಾಯಗೊಂಡಿರುವ ಬೈಕ್ ಸವಾರ ಸೊರಬ ತಾಲ್ಲೂಕಿನ ಸುರಣಗಿ ಗ್ರಾಮದ ಜೆಸಿಬಿ ಚಾಲಕ ದೇವರಾಜ ಪರಸಪ್ಪ ಸುರಣಗಿ ಎಂದು ತಿಳಿದುಬಂದಿದ್ದು, ಶಿರಸಿ ಆರ್. ಟಿ.ಓ ಅಧಿಕಾರಿಯ ಬೇಜವಾಬ್ದಾರಿ ಈ ಅಪಘಾತಕ್ಕೆ ಕಾರಣ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಬನವಾಸಿ ಪೊಲೀಸ್ ಠಾಣೆಯ ಪಿಎಸ್ಐ ಮಾಂತೇಶ ಕುಂಬಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.



