ಒಣ ಕೆಮ್ಮಿಗೆ ಪರಿಹಾರವನ್ನು ಕಂಡುಹಿಡಿಯುವುದು ತುಂಬಾ ಕಷ್ಟ. ಒಮ್ಮೆ ನಿಮಗೆ ಒಣ ಕೆಮ್ಮಿನ ಸಮಸ್ಯೆ ಇದ್ದರೆ ಅದು ದೂರವಾಗುವುದು ತುಂಬ ಕಷ್ಟ.
ಒಣ ಕೆಮ್ಮಿನ ಮುಖ್ಯ ಕಾರಣವೆಂದರೆ ಧೂಳಿನ ಅಲರ್ಜಿ, ಇದು ಅಸ್ತಮಾ ರೋಗಿಗಳಲ್ಲಿ ಸಹ ನಿಯಂತ್ರಿಸಲಾಗುವುದಿಲ್ಲ. ಇದನ್ನು ತಪ್ಪಿಸಲು, ಸಿರಪ್ ಕುಡಿಯುವ ಬದಲು ಜೇನುತುಪ್ಪವನ್ನು ಬಳಸಲು ಪ್ರಯತ್ನಿಸಿ. ಮಲಗುವ ಮುನ್ನ ನಿಮ್ಮ ಬಾಯಿಯಲ್ಲಿ ಒಂದು ಚಮಚ ಜೇನುತುಪ್ಪವನ್ನು ಬಾಯಲ್ಲಿ ಹಾಕಿಕೊಳ್ಳುವುದರಿಂದ ಕೆಮ್ಮು ನಿವಾರಿಸುತ್ತದೆ.
ಒಂದು ಲೋಟ ಬೆಚ್ಚಗಿನ ನೀರಿಗೆ ಒಂದು ಚಿಟಿಕೆ ಅರಶಿನ ಪುಡಿಯನ್ನು ಬೆರೆಸಿ ಕುಡಿಯಿರಿ. ಮಲಗುವ ಮುನ್ನ ಬೆಚ್ಚಗಿನ ಹಾಲಿನಲ್ಲಿ ಒಂದು ಚಿಟಿಕೆ ಅರಶಿನ ಹಾಕಿ ಮಕ್ಕಳಿಗೆ ನೀಡಿದರೆ ಕೆಮ್ಮು ನಿವಾರಣೆಯಾಗುತ್ತದೆ.