ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಲಖನೌನಲ್ಲಿ ಮಂಗಳವಾರ ರಾತ್ರಿ ಬಹುಮಹಡಿ ಕಟ್ಟಡವೊಂದು ಕುಸಿದುಬಿದ್ದು ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಸಮಾಜವಾದಿ ಪಕ್ಷ(ಎಸ್ಪಿ)ದ ಶಾಸಕರ ಪುತ್ರನನ್ನು ಬುಧವಾರ ಬಂಧಿಸಲಾಗಿದೆ.
ಎಸ್ಪಿ ಶಾಸಕ ಮತ್ತು ಮಾಜಿ ಸಚಿವ ಶಾಹಿದ್ ಮಂಜೂರ್ ಅವರ ಪುತ್ರ ನವಾಜಿಶ್ ಶಾಹಿದ್ನನ್ನು ಮೀರತ್ ನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಫ್ಐಆರ್ನಲ್ಲಿ ಹೆಸರಿಸಲಾದ ಮೂವರ ಪೈಕಿ ನವಾಜಿಶ್ ಶಾಹಿದ್ ಸಹ ಒಬ್ಬರಾಗಿದ್ದು, ಮೊಹಮ್ಮದ್ ತಾರಿಕ್ ಮತ್ತು ಫಹಾದ್ ಯಜ್ದಾನಿ ಇತರ ಇಬ್ಬರು ಆರೋಪಿಗಳಾಗಿದ್ದಾರೆ. ನವಾಜಿಶ್ ಶಾಹಿದ್, ಯಜ್ದಾನ್ ಬಿಲ್ಡರ್ಸ್ ನಿರ್ಮಿಸಿದ ಕಟ್ಟಡದ ಜಮೀನಿನ ಮಾಲೀಕ ಎಂದು ಆರೋಪಿಸಲಾಗಿದೆ.