ಆಮ್ ಆದ್ಮಿ ಪಾರ್ಟಿಯಿಂದ ಹೊಸ ಲೆಕ್ಕಾಚಾರ: ಏಕಾಏಕಿ ಹರ್ಯಾಣ ಘಟಕ ವಿಸರ್ಜಿಸಿದ ಕೇಜ್ರಿವಾಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ದೆಹಲಿ ಹಾಗೂ ಪಂಜಾಬ್ ರಾಜ್ಯಗಳಲ್ಲಿ ಗದ್ದುಗೆ ಏರಿದ ಆಮ್ ಆದ್ಮಿ ಪಾರ್ಟಿಗೆ ಇದೀಗ ಮತ್ತೊಂದು ಹಿನ್ನಡೆಯಾಗಿದೆ.

ಅತ್ತ ಪಕ್ಷದ ನಾಯಕರು ಭ್ರಷ್ಟಚಾರ, ಅಕ್ರಮ ಹಣ ವರ್ಗಾವಣೆ ಪ್ರಕರಣಗಳು ಜೈಲು ಪಾಲಾಗಿದ್ದಾರೆ. ಮತ್ತೊಂದೆಡೆ ಪಕ್ಷ ಸಂಘಟನೆಗೆ ಅತೀವ ಒತ್ತು ನೀಡಿರುವ ಅರವಿಂದ್ ಕೇಜ್ರಿವಾಲ್‌ಗೆ ಹಿನ್ನಡೆಯಾಗಿದ್ದು, ಏಕಾಏಕಿ ಹರ್ಯಾಣ ಆಮ್ ಆದ್ಮಿ ಪಾರ್ಟಿ ಘಟಕವನ್ನು ವಿಸರ್ಜಿಸಲಾಗಿದೆ.

ಹರ್ಯಾಣದಲ್ಲಿ ಆಮ್ ಆದ್ಮಿ ಪಾರ್ಟಿ ಕೈಗೊಂಡಿರುವ ಈ ನಡೆ ರಾಜಕೀಯವಾಗಿ ಸವಾಲಾಗಿದೆ. ಮುಂದಿನ ವರ್ಷ ಹರ್ಯಾಣದಲ್ಲಿ ಚುನಾವಣೆ ಎದುರಾಗಲಿದೆ. ಈಗಾಗಲೇ ಬಿಜೆಪಿ ಹಾಗೂ ಕಾಂಗ್ರೆಸ್ ತಯಾರಿ ನಡೆಸುತ್ತಿದೆ. ಇತ್ತ ಹರ್ಯಾಣದ ಮೇಲೆ ಹಿಡಿತ ಸಾಧಿಸಲು ಹೊರಟ್ಟಿದ್ದ ಆಪ್‌ ಇದೀಗ ಹೊಸದಾಗಿ ಪದಾಧಿಕಾರಿಗಳು, ಸದಸ್ಯರ ನೇಮಕ ಮಾಡಬೇಕಾಗಿದೆ.

 

ಹರ್ಯಾಣ ಆಮ್ ಆದ್ಮಿ ಪಾರ್ಟಿಯನ್ನು ಹದ್ದುಬಸ್ತಿನಲ್ಲಿಡಲು ಇದೀಗ ಸಂಪೂರ್ಣ ಹರ್ಯಾಣ ಆಪ್ ವಿಭಾಗವನ್ನು ವಿಸರ್ಜಿಸಲಾಗಿದೆ. ಹೊಸ ಸದಸ್ಯರ ನೇಮಕ ನಡೆಯಲಿದೆ. ಇದು ಮುಂದಿನ ವರ್ಷ ನಡೆಯಲಿರುವ ಚುನಾವಣೆಗೆ ಹೊಸ ಸವಾಲು ನೀಡಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!