ಹೊಸದಿಗಂತ ವರದಿ,ಶಿವಮೊಗ್ಗ:
ಹಿಂದು ಜಾಗರಣ ವೇದಿಕೆಯ ತ್ರೈ ವಾರ್ಷಿಕ ಸಮ್ಮೇಳನದ ಹಿನ್ನೆಲೆಯಲ್ಲಿ ನಗರದಲ್ಲಿ ಭವ್ಯ ಶೋಭಾಯಾತ್ರೆ ನಡೆಯಿತು.
ಮಧ್ಯಾಹ್ನ 3 ಕ್ಕೆ ಎನ್ಇಎಸ್ ಮೈದಾನದಿಂದ ಆರಂಭವಾದ ಶೋಭಾಯಾತ್ರೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಪುನಃ ಎನ್ಇಎಸ್ ಮೈದಾನ ತಲುಪಿತು.
ಶೋಭಾಯಾತ್ರೆ ಕೇಸರಿ ರಂಗಿನಿಂದ ಕಂಗೊಳಿಸಿತು. ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಕೇಸರಿ ಪೇಟ ಧರಿಸಿ ಶೋಭಾಯಾತ್ರೆಗೆ ರಂಗು ತಂದರು. ಮೆರವಣಿಗೆಯಲ್ಲಿ ಭಾರತ ಮಾತೆಯನ್ನು ಹೊತ್ತ ರಥ ಸಾಗಿ ಬಂತು.