ಹೊಸದಿಗಂತ ಡಿಜಿಟಲ್ ಡೆಸ್ಕ್ :
ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಭಕ್ತರೊಂದಿಗೆ ಹೆಜ್ಜೆಹಾಕಿ ಅಯ್ಯಪ್ಪ ಸ್ವಾಮಿಯ ದರುಶನ ಪಡೆದಿದ್ದಾರೆ.
ಕಳೆದ ಏಳು ವರ್ಷಗಳ ಹಿಂದೆ ಶಬರಿಮಲೆ ಯಾತ್ರೆ ಕೈಗೊಳ್ಳುವಂತ ಸಂಕಲ್ಪ ಮಾಡಿದ್ದರು.ಅದರ ಸಲುವಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಅಯ್ಯಪ್ಪ ಸ್ವಾಮಿಯ ದರುಶನವನ್ನು ಪಡೆದಿದ್ದಾರೆ.
ಈ ಕುರಿತಂತೆ ಮಾತನಾಡಿದಂತ ಅವರು, ನಾನು ಹಲವು ಭಾರಿ ಅಯ್ಯಪ್ಪ ಸ್ವಾಮಿ ಮಾಲೆಯನ್ನು ಧರಿಸಬೇಕು ಅಂದುಕೊಂಡಿದ್ದೆನು. ಆದ್ರೇ ಅದು ಸಾಧ್ಯವಾಗಿರಲಿಲ್ಲ. ಈ ವರ್ಷ ಸಾಧ್ಯವಾಯಿತು. ಮಾಲೆಯನ್ನು ಧರಿಸಿ, ಭಕ್ತರ ಜೊತೆಗೆ ತೆರಳಿ, ಅಯ್ಯಪ್ಪ ಸ್ವಾಮಿದರುಶನವನ್ನು ಮಾಡಿದ್ದೇನೆ ಎಂದು ಹೇಳಿದರು.