ಕಾರ್ತಿಕ ಮಾಸ ಅನ್ನ ಸಂತರ್ಪಣೆ ವೇಳೆ ಜೇನುನೊಣಗಳ ದಾಳಿ: 25 ಮಂದಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೋನಸೀಮಾ ಜಿಲ್ಲೆಯ ಆತ್ರೇಯಪುರಂ ಮಂಡಲದ ಅಂಕಂಪಲೆಂ ಗ್ರಾಮದಲ್ಲಿ ಕಾರ್ತಿಕ ಮಾಸ ಹಿನ್ನೆಲೆಯಲ್ಲಿ ಅನ್ನ ಸಂತರ್ಪಣೆ(ವನ ಭೋಜನ) ಕಾರ್ಯಕ್ರಮದಲ್ಲಿ ಜೇನು ದಾಳಿ ನಡೆಸಿವೆ. ಕಾರ್ತಿಕ ಮಾಸದ ನಿಮಿತ್ತ ಗ್ರಾಮದ ಕೆಲ ಕುಟುಂಬಗಳು ಕಾರ್ತಿಕ ವನ ಭೋಜನ ಏರ್ಪಡಿಸಿದ್ದರು.

ಈ ಕಾರ್ಯಕ್ರಮದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಎಲ್ಲರೂ ಸಂತೋಷದಿಂದ ಆಟ-ಪಾಠಗಳ ಬಳಿಕ ಆಹಾರ ಸೇವನೆ ವೇಳೆ ಜೇನುನೊಣಗಳು ದಾಳಿ ಮಾಡಿದವು. ಈ ದಾಳಿಯಲ್ಲಿ 25 ಮಂದಿ ಗಾಯಗೊಂಡಿದ್ದಾರೆ. 10 ಮಂದಿ ಪ್ರಜ್ಞಾಹೀನರಾಗಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದೆ. ಇಬ್ಬರು ಮಹಿಳೆಯರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!