ದಿನಭವಿಷ್ಯ | ಕಾಡುತ್ತಿದ್ದ ಆರ್ಥಿಕ ಬಿಕ್ಕಟ್ಟು ಇಂದು ನಿವಾರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಮೇಷ
ನೀವಿಂದು ಅತ್ಯಂತ ಸಹನೆಯಿಂದ ವರ್ತಿಸ ಬೇಕು. ಯಾವುದೇ ಪರಿಸ್ಥಿತಿಯನ್ನು ಕ್ರೀಡಾಸ್ಫೂರ್ತಿಯಿಂದ ಸ್ವೀಕರಿಸಬೇಕು. ಕೋಪತಾಪ ಸಲ್ಲದು.

ವೃಷಭ
ಪ್ರಮುಖ ವಿಷಯಗಳಲ್ಲಿ ನಿಮ್ಮ ನಿಲುವಿನಿಂದ ಹಿಂದೆ ಸರಿಯಬೇಡಿ. ನಿಮ್ನನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಕೆಲವರು ಯತ್ನಿಸುವರು. ಅದಕ್ಕೆ ಅವಕಾಶ ನೀಡಬೇಡಿ.

ಮಿಥುನ
ನಿಮ್ಮ  ಗುರಿ ಸಾಧಿಸಲು ಅಡ್ಡಿಗಳು ಒದಗುತ್ತವೆ.  ನಿಮ್ಮ ಏಳಿಗೆಯನ್ನು ಕಂಡು ಕೆಲವರು ಕರುಬುತ್ತಾರೆ. ಅವರ ಮಾತಿಗೆ ಆಹಾರವಾಗಬೇಡಿ.

ಕಟಕ
ವೃತ್ತಿಯಲ್ಲಿ ನಿಮ್ಮ ವಿಶ್ವಾಸ ವೃದ್ಧಿಸುವ ಬೆಳವಣಿಗೆ. ನಿಮ್ಮನ್ನು ದಮನಿಸುವ  ಇತರರ ಪ್ರಯತ್ನ ಸಫಲ ಆಗುವುದಿಲ್ಲ. ಆರ್ಥಿಕ ಲಾಭ ಸಂಭವ.

ಸಿಂಹ
ಕಾಡುತ್ತಿದ್ದ ಆರ್ಥಿಕ ಬಿಕ್ಕಟ್ಟು ಇಂದು ನಿವಾರಣೆ. ಹಣಕಾಸು ಸ್ಥಿತಿ ಸುಧಾರಿಸಲಿದೆ. ಕುಟುಂಬದಲ್ಲಿ ಭಿನ್ನಮತ ಮೂಡಿದರೂ ಬಳಿಕ ಶಮನ.

ಕನ್ಯಾ
ನಿಮ್ಮ ಮುಖ್ಯ ಉದ್ದೇಶವೊಂದು ಇಂದು ಈಡೇರುವ ಸಂಭವ. ಅದಕ್ಕೆ ಪೂರಕ ಬೆಳವಣಿಗೆ ಸಂಭವಿಸುವುದು. ಆದರೆ ಸಂತೋಷದಲ್ಲಿ ಮೈಮರೆಯಬೇಡಿ.

ತುಲಾ
ಕುಟುಂಬದಲ್ಲಿ ಸಂಬಂಧ ಸುಧಾರಿಸುವ ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಸಫಲತೆ ಸಿಗುವುದು. ಮನಸ್ತಾಪ ದೂರವಾಗಲಿದೆ. ಆಪ್ತರ ಸಹಕಾರ.

ವೃಶ್ಚಿಕ
ಕೌಟುಂಬಿಕ ಸಮಸ್ಯೆ ಯನ್ನು ವಿಶ್ವಾಸದಿಂದ ನಿಭಾಯಿಸುವಿರಿ. ಮಾತು ವಿಕೋಪಕ್ಕೆ ಹೋಗದಂತೆ ನೋಡಿಕೊಳ್ಳುವುದು ಅತಿ ಮುಖ್ಯ. ಸಂಧಾನದ ಹಾದಿ ಉತ್ತಮ.

ಧನು
ಎಂದಿನಂತೆ ದಿನ ಸಾಗದು. ಕಾರ್ಯದಲ್ಲಿ ಹೆಚ್ಚು ಕ್ರಿಯಾಶೀಲತೆ ಬೇಕು. ಇಲ್ಲವಾದರೆ ವೈಫಲ್ಯ ಕಾಣುವಿರಿ. ಮಾನಸಿಕ ಉದ್ವಿಗ್ನತೆ ಹೆಚ್ಚುವ ಸನ್ನಿವೇಶ.

ಮಕರ
ಆರ್ಥಿಕ ಮುಗ್ಗಟ್ಟು ಕಾಡಬಹುದು. ಪ್ರಮುಖ ಕಾರ್ಯಕ್ಕೆ ಹಣದ ಅವಶ್ಯಕತೆ ಬೀಳಬಹುದು. ಮಾನಸಿಕ ಒತ್ತಡದಿಂದ ಸಂಘರ್ಷ ಸಂಭವ.

ಕುಂಭ
ಕೌಟುಂಬಿಕ ಪರಿಸರವು ಮನಸ್ಸಿಗೆ ಕಿರಿಕಿರಿ ಸೃಷ್ಟಿಸಬಹುದು. ಕೆಲವರ ವರ್ತನೆ ಅಸಹನೀಯ ಎನಿಸುತ್ತದೆ. ಸಹನೆಯಿಂದ ಅದನ್ನು ನಿಭಾಯಿಸಿರಿ.

ಮೀನ
ಸಹೋದ್ಯೋಗಿ ಜತೆ ಸಂಘರ್ಷ ಉಂಟಾದೀತು. ಅದನ್ನು ವಿಕೋಪಕ್ಕೆ ಕೊಂಡೊಯ್ಯದಿರಿ. ಸಮಾಧಾನದಿಂದ ವರ್ತಿಸುವುದೊಳಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!