ಹೊಸದಿಗಂತ ಡಿಜಿಟಲ್ ಡೆಸ್ಕ್
ಬುಡೌನ್ ಜಿಲ್ಲೆಯ ನಿವಾಸಿ ಜೈದೇವ್ ಆಜಾದ್ ಅವರು ಮಾಜಿ ಪೊಲೀಸ್ ಪೇದೆಯಾಗಿದ್ದು, ಜಿಆರ್ಪಿಯಲ್ಲಿ ಸೇವೆ ಸಲ್ಲಿಸಿದ್ದರು.
ಅವರು ಕ್ರಾಂತಿಕಾರಿ ಗುಂಪುಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದರು. ಸ್ವಾತಂತ್ರ್ಯ ಚಳುವಳಿಯಲ್ಲಿ ತೊಡಗಿಸಿಕೊಂಡ ಇವರ ಮೇಲೆ ಬ್ರಿಟಿಷ್ ಸರ್ಕಾರದ ಕಣ್ಣಿತ್ತು. 1942 ರ ಅಕ್ಟೋಬರ್ 22 ರಂದು ಬುರ್ರಾ ಫರೀದ್ಪುರ ಗ್ರಾಮದ ಧರ್ಮಶಾಲಾದಲ್ಲಿ ಕಾಂಗ್ರೆಸ್ಸಿಗರು ನಡೆಸುತ್ತಿದ್ದ ಕಾರ್ಯಕ್ರದಲ್ಲಿ ಸಬ್ ಇನ್ಸ್ ಪೆಕ್ಟರ್ ಒಬ್ಬರ ಪಿಸ್ತೂಲ್ ಕಳವಾಗಿತ್ತು. ಈ ಆಪಾದನೆಯನ್ನು ಜೈದೇವ್ ಆಜಾದ್ ಅವರ ಮೇಲೆ ಹೊರಿಸಿ ಅವರನ್ನು ಧರ್ಮಶಾಲಾದಲ್ಲಿ ಬಂಧಿಸಲಾಯಿತು. ಸೆಕ್ಷನ್ 19 ಆರ್ಮ್ಸ್ ಆಕ್ಟ್ ಅಡಿಯಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು. 1943 ರ ಮಾರ್ಚ್ 2 ರಂದು ಅವರನ್ನು ಅಪರಾಧಿ ಎಂದು ತೀರ್ಮಾನಿಸಿ 4 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 100 ರೂ. ದಂಡವನ್ನು ವಿಧಿಸಲಾಯಿತು. ಅಜಾದ್ ದೇಶಕ್ಕಾಗಿ 3 ವರ್ಷಗಳ ಕಠಿಣ ಜೈಲು ಶಿಕ್ಷೆ ಅನುಭವಿಸಿದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ