ಸಬ್ ಇನ್ಸ್ ಪೆಕ್ಟರ್ ಪಿಸ್ತೂಲ್‌ ಕದ್ದ ಆಪಾದನೆ ಮೇಲೆ ಅಜಾದ್‌ ರನ್ನು ಹಿಂಸಿಸಿತ್ತು ಬ್ರಿಟಿಷ್‌ ಸರ್ಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಬುಡೌನ್ ಜಿಲ್ಲೆಯ ನಿವಾಸಿ ಜೈದೇವ್ ಆಜಾದ್ ಅವರು ಮಾಜಿ ಪೊಲೀಸ್ ಪೇದೆಯಾಗಿದ್ದು, ಜಿಆರ್‌ಪಿಯಲ್ಲಿ ಸೇವೆ ಸಲ್ಲಿಸಿದ್ದರು.
ಅವರು ಕ್ರಾಂತಿಕಾರಿ ಗುಂಪುಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದರು. ಸ್ವಾತಂತ್ರ್ಯ ಚಳುವಳಿಯಲ್ಲಿ ತೊಡಗಿಸಿಕೊಂಡ ಇವರ ಮೇಲೆ ಬ್ರಿಟಿಷ್‌ ಸರ್ಕಾರದ ಕಣ್ಣಿತ್ತು. 1942 ರ ಅಕ್ಟೋಬರ್‌ 22 ರಂದು ಬುರ್ರಾ ಫರೀದ್‌ಪುರ ಗ್ರಾಮದ ಧರ್ಮಶಾಲಾದಲ್ಲಿ ಕಾಂಗ್ರೆಸ್ಸಿಗರು ನಡೆಸುತ್ತಿದ್ದ ಕಾರ್ಯಕ್ರದಲ್ಲಿ ಸಬ್ ಇನ್ಸ್ ಪೆಕ್ಟರ್ ಒಬ್ಬರ ಪಿಸ್ತೂಲ್ ಕಳವಾಗಿತ್ತು. ಈ ಆಪಾದನೆಯನ್ನು ಜೈದೇವ್ ಆಜಾದ್ ಅವರ ಮೇಲೆ ಹೊರಿಸಿ ಅವರನ್ನು ಧರ್ಮಶಾಲಾದಲ್ಲಿ ಬಂಧಿಸಲಾಯಿತು. ಸೆಕ್ಷನ್ 19 ಆರ್ಮ್ಸ್ ಆಕ್ಟ್ ಅಡಿಯಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು. 1943 ರ ಮಾರ್ಚ್ 2 ರಂದು ಅವರನ್ನು ಅಪರಾಧಿ ಎಂದು ತೀರ್ಮಾನಿಸಿ 4 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 100 ರೂ. ದಂಡವನ್ನು ವಿಧಿಸಲಾಯಿತು. ಅಜಾದ್‌ ದೇಶಕ್ಕಾಗಿ 3 ವರ್ಷಗಳ ಕಠಿಣ ಜೈಲು ಶಿಕ್ಷೆ ಅನುಭವಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!