ದಿನಭವಿಷ್ಯ | ಎಂದಿನಂತಿಲ್ಲದ ದಿನ, ಕೆಲವು ವಿಚಾರಗಳಲ್ಲಿ ಅನಿಶ್ಚಿತತೆ

ಮೇಷ
ಹಲವಾರು ಬಗೆಯ ಗೊಂದಲಗಳು. ಯಾವ  ಕೆಲಸ ಮಾಡಲೂ ಮನವಿರದಂತಹ ಸ್ಥಿತಿ. ಎಲ್ಲರೊಡನೆ ಇದ್ದೂ  ಬೆರೆಯಲಾರದ ಮನಸ್ಥಿತಿ.
ವೃಷಭ
ಎಂದಿನಂತಿಲ್ಲದ ದಿನ. ಕೆಲವು ಮುಖ್ಯ ವಿಚಾರಗಳಲ್ಲಿ ಅನಿಶ್ಚಿತತೆ ಕಾಡುತ್ತದೆ. ತಿನ್ನುವ ಆಹಾರದಲ್ಲಿ ಎಚ್ಚರ ವಹಿಸಿ, ಆರೋಗ್ಯ ಕೆಡಬಹುದು.ಮಿಥುನ
ಹೊಸ ವ್ಯವಹಾರ ಆರಂಭಿಸಲು ಸೂಕ್ತ ಕಾಲವಲ್ಲ. ತುಸು ಕಾಯುವುದು ಒಳಿತು. ಇತರರ ಸಹಕಾರವೂ ನಿಮಗೆ ಲಭಿಸದು. ಖರ್ಚು ಹೆಚ್ಚುವುದು.ಕಟಕ
ಕೆಲಸದಲ್ಲಿ ನಿಮ್ಮ ನಿರ್ಲಕ್ಷ್ಯವು  ದುಬಾರಿಯಾದೀತು. ತುಸು ಎಚ್ಚರ ವಹಿಸಿರಿ. ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಲೆಂದೇ ಕೆಲವರು ಕಾದಿರುತ್ತಾರೆ.

ಸಿಂಹ
ಮನೆಯಲ್ಲಿ ಶಾಂತಿ ನೆಲೆಸಬೇಕಾದರೆ ವಾದದಿಂದ ದೂರವಿರಿ. ನಿಮ್ಮ ಹಠವನ್ನೆ ಸಾಧಿಸಬೇಡಿ. ವಿದ್ಯಾರ್ಥಿಗಳಿಗೆ ಪ್ರತಿಕೂಲ ಫಲಿತಾಂಶ ಬರಬಹುದು.

ಕನ್ಯಾ
ಆರ್ಥಿಕ ಒತ್ತಡ. ಖರೀದಿಯ ಹುಮ್ಮಸ್ಸು ತುಸು ನಿಯಂತ್ರಿಸಿ. ಸಣ್ಣ ವಿಷಯಕ್ಕೇ ಮನೆಯಲ್ಲಿ ವಾಗ್ವಾದ ನಡೆದೀತು. ವಿಕೋಪಕ್ಕೆ ಕೊಂಡೊಯ್ಯದಿರಿ.

ತುಲಾ
ಕೌಟುಂಬಿಕ ಹೊಣೆ ಹೆಚ್ಚುವುದು. ಒತ್ತಡವೂ ಅಧಿಕ. ಇದರಿಂದ ನಿಮ್ಮ ಮನಸ್ಸಿಗೆ ಖಿನ್ನತೆ ಬಾಧಿಸಬಹುದು. ದೇವರ ಪ್ರಾರ್ಥನೆ ನೆಮ್ಮದಿ ತರುವುದು.

ವೃಶ್ಚಿಕ
ಆಸ್ತಿಪಾಸ್ತಿ ಖರೀದಿ, ಮನೆ ನವೀಕರಣ ಮುಂತಾದ್ದಕ್ಕೆ ಸೂಕ್ತ ದಿನವಲ್ಲ. ವಿಘ್ನಗಳು ಬಾಧಿಸಬಹುದು. ವೃತ್ತಿಯಲ್ಲಿ ಪ್ರತಿಕೂಲ ಬೆಳವಣಿಗೆ. ಸಹನೆ ಕಾಯ್ದುಕೊಳ್ಳಿ.

ಧನು
ವಸ್ತು ಖರೀದಿಗೆ ಮನ ಮಾಡುವಿರಿ. ಆದರೆ ಅದಕ್ಕೆ ಹಣ ಹೊಂದಿಸುವುದೇ ಸಮಸ್ಯೆ. ಮನೆಯಲ್ಲಿ ಈ ವಿಷಯಕ್ಕೆ ಸಂಬಂಧಿಸಿ ವಾಗ್ವಾದ ನಡೆದೀತು.

ಮಕರ
ಜೀವನ ಶೈಲಿ ಬದಲಿಸಲು ಯೋಜಿಸಿದ್ದರೆ  ಮುಂದೂಡಿ. ಈಗ ಕಾಲ ಪಕ್ವವಾಗಿಲ್ಲ. ನಿಮ್ಮ ಕ್ರಿಯೆ ತಪ್ಪರ್ಥ ಮೂಡಿಸಬಹುದು.

ಕುಂಭ
ಸೂಕ್ಷ್ಮ ಸಂವೇದಿಯಾಗಿ ವರ್ತಿಸುವಿರಿ. ಅದಕ್ಕೆ ಕಾರಣ ಸಂಬಂಧದಲ್ಲಿ ಮೂಡಿದ ಏರುಪೇರು. ನಿಮ್ಮಿಂದಲೇ ಸಮಸ್ಯೆ ಸೃಷ್ಟಿಯಾದೀತು, ಎಚ್ಚರ ವಹಿಸಿರಿ.

ಮೀನ
ಮಾನಸಿಕವಾಗಿ ಬಳಲಿದ್ದೀರಿ. ಇದು ನಿಮ್ಮ ದೇಹದ ಮೇಲೂ ಪರಿಣಾಮ ಬೀರುವುದು.  ನಯವಂಚಕರ ಕುರಿತು ಎಚ್ಚರದಿಂದಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!