ದಿನಭವಿಷ್ಯ| ಇದ್ದುದಷ್ಟೆ ಸಾಕು ಎಂಬ ಧೋರಣೆ ಬಿಟ್ಟುಬಿಡಿ. ಹೆಚ್ಚಿನದ್ದನ್ನು ಸಾಧಿಸಲು ಗಮನ ಕೊಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 
ಮೇಷ
ಯಾರನ್ನಾದರೂ ಅತಿಯಾಗಿ ಹಚ್ಚಿಕೊಳ್ಳು ವುದು ನೋವು ತರುತ್ತದೆ. ಇದು ನಿಮಗೆ ಅನುಭವಕ್ಕೆ ಬರುವುದು. ವ್ಯಕ್ತಿಯೊಬ್ಬರ ವರ್ತನೆಯಿಂದ ಬೇಸರ.ವೃಷಭ
ಇದ್ದುದಷ್ಟೆ ಸಾಕು ಎಂಬ ಧೋರಣೆ ಬಿಟ್ಟುಬಿಡಿ. ಹೆಚ್ಚಿನದ್ದನ್ನು ಸಾಧಿಸಲು ಗಮನ ಕೊಡಿ. ಏಕೆಂದರೆ ನಿಮ್ಮ ಸಾಮರ್ಥ್ಯ ಇನ್ನೂ ಹೆಚ್ಚಿನದ್ದಿದೆ. ಆರ್ಥಿಕ ಒತ್ತಡ ಹೆಚ್ಚುವುದು.

ಮಿಥುನ
ಕುಟುಂಬದಲ್ಲಿ ವಾದವಿವಾದಕ್ಕೆ ಆಸ್ಪದ ಕೊಡದಿರಿ. ದುಡುಕಿನ ವರ್ತನೆ ತೋರದಿರಿ. ಸಂಯಮದ ವರ್ತನೆ  ಅತಿ ಮುಖ್ಯ. ವೃತ್ತಿಯಲ್ಲಿ ಉನ್ನತಿ ಕಾಣುವುದು.

ಕಟಕ
ಎಲ್ಲರ ಬೇಕುಬೇಡಗಳಿಗೆ ಸ್ಪಂದಿಸುವ ನಿಮ್ಮ ಮನೋಭಾವ ಮೆಚ್ಚುಗೆ ಗಳಿಸುವುದು. ಆರ್ಥಿಕ ಉನ್ನತಿ. ಪ್ರಮುಖ ಬೇಡಿಕೆಯೊಂದು ಈಡೇರುವುದು.

ಸಿಂಹ
ಇತರರು ನಿಮ್ಮ ಮಾತು ಕೇಳಬೇಕೆಂದು ಬಯಸುವಿರಿ. ಆದರೆ ನಿಮ್ಮ ಮಾತನ್ನು ಕಡೆಗಣಿಸುವರು.  ಅದಕ್ಕಾಗಿ ಬೇಸರಿಸಬೇಡಿ.

ಕನ್ಯಾ
ನಿಮ್ಮ ಕಾರ್ಯ ಸಾಧಿಸಲು ಉತ್ತಮ ಯೋಜನೆ ಹಾಕಿರಿ. ಆತುರದ ತೀರ್ಮಾನ ಹಾನಿ ತಂದೀತು. ಬಂಧುಗಳಿಂದ ಅಸಹಕಾರ.

ತುಲಾ
ಕೌಟುಂಬಿಕ ನಿರ್ವಹಣೆ ಯಲ್ಲಿ ತೊಡಕು ಎದುರಿಸುವಿರಿ. ಕೆಲವರ ಅಸಹಕಾರ. ವಾಗ್ವಾದ, ಮನಸ್ತಾಪ ನಡೆದೀತು. ನೀವು ಮಾತ್ರ ಸಹನೆಯಿಂದ ವರ್ತಿಸಿ.

ವೃಶ್ಚಿಕ
ಭವಿಷ್ಯದ ಕುರಿತಂತೆ ಚಿಂತಿಸುತ್ತಾ ಕೊರಗದಿರಿ.   ‘ಇಂದಿನ ದಿನ’ ಕೂಡಾ ಮುಖ್ಯವೆಂದು ಅರಿಯಿರಿ. ಕೌಟುಂಬಿಕ ಬಿಕ್ಕಟ್ಟಿಗೆ ಸಂಧಾನದ ದಾರಿ ಒಳ್ಳೆಯದು.

ಧನು
ಇತರರ ಆದೇಶ, ಸೂಚನೆ ನಿಮ್ಮ ಪಾಲಿಗೆ ಅಸಹನೀಯ ಎನಿಸುವುದು.  ನಿಮ್ಮ ಅಭಿಪ್ರಾಯ ತಿಳಿಸಲು  ಹಿಂಜರಿಕೆ ಬೇಡ. ಬಂಧುಗಳ ಅಸಹಕಾರ.

ಮಕರ
ಪ್ರೀತಿಪಾತ್ರರ ಸಂಗದಲ್ಲಿ ಮುಕ್ತವಾಗಿ ವ್ಯವಹರಿಸಿ. ನಿಮ್ಮ ಭಾವನೆ ಮತ್ತು ಕಷ್ಟ ಅಡಗಿಸಿಡಬೇಡಿ. ಮುಕ್ತ ಮಾತಿನಿಂದ ಕೆಲವೊಮ್ಮೆ ಸಮಸ್ಯೆಗೆ ಪರಿಹಾರ ದೊರಕುವುದು.

ಕುಂಭ
ವೃತ್ತಿಯಲ್ಲಿ ಸಂಕಷ್ಟ. ಹಣದ ಅಡಚಣೆ ಕಾಡುವುದು. ಆಪ್ತರ ಜತೆ ಮನಸ್ತಾಪ ಉಂಟಾದೀತು. ಸಂಯಮದಿಂದ ವರ್ತಿಸುವುದು ಮುಖ್ಯ.

ಮೀನ
ಪ್ರೀತಿಯ ವಿಚಾರದಲ್ಲಿ ಸಮಸ್ಯೆ ಉಂಟಾದೀತು. ಪ್ರೀತಿಪಾತ್ರರ ನಿಷ್ಠೆಯನ್ನು ಶಂಕಿಸಲು ಹೋಗದಿರಿ. ಭಾವನೆ ಅರ್ಥ ಮಾಡಿಕೊಂಡು ವ್ಯವಹರಿಸಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!