ದಿನಭವಿಷ್ಯ| ಎಲ್ಲರೂ ನೀವು ಬಯಸಿದಂತೆಯೇ ನಡೆದುಕೊಳ್ಳಬೇಕು ಎಂದು ಆಶಿಸದಿರಿ..

ಮೇಷ
ಹೊಸ ವ್ಯವಹಾರದಲ್ಲಿ ಹಣ ಹೂಡಲು ಸೂಕ್ತ ದಿನ. ಕೌಟುಂಬಿಕ ಗೊಂದಲ ಪರಿಹರಿಸಲು ಆದ್ಯತೆ ಕೊಡಿ. ಉದ್ಯೋಗದಲ್ಲಿ ಒತ್ತಡ ಹೆಚ್ಚು.

ವೃಷಭ
ನಿಮ್ಮ ಉದ್ದೇಶ ಸಾಧಿಸಲ್ಪಡಲು ಸಂಘಟಿತ ಪ್ರಯತ್ನ ಅಗತ್ಯ. ನೀವೊಬ್ಬರೇ ಎಲ್ಲವನ್ನೂ ಸಾಧಿಸುತ್ತೀರಿ ಎಂದು ಹೊರಟರೆ ಕೆಲಸ ಕೆಟ್ಟೀತು.

ಮಿಥುನ
ಅಧಿಕ ಕೆಲಸದ ಒತ್ತಡ. ಇದರಿಂದಾಗಿ ತಲೆನೋವು ಬಾಧಿಸಬಹುದು. ಆತ್ಮೀಯ ಸಂಬಂಧದಲ್ಲಿ ಬಿರುಕು ಉಂಟಾದೀತು. ಹೊಂದಾಣಿಕೆ ಮುಖ್ಯ.

ಕಟಕ
ಯಾವುದೇ ಕಾರ್ಯ ಇಂದು ಪೂರ್ಣವಾಗದು. ನಿಮ್ಮ ಕೆಲಸಕ್ಕೆ ಅಡ್ಡಿಗಳು. ಸಹೋದ್ಯೋಗಿಗಳ ಅಸಹಕಾರ. ಕೌಟುಂಬಿಕ  ಭಿನ್ನಮತ.

ಸಿಂಹ
ಅಚ್ಚರಿಯ ಬೆಳವಣಿಗೆ ಉಂಟಾದೀತು. ಅದು ನಿಮಗೆ ಒಳಿತನ್ನೇ ತರಬಲ್ಲುದು. ಸ್ನೇಹಿತರ ಕುರಿತಾದ ವದಂತಿ ನಂಬಲು ಹೋಗಿ ಸ್ನೇಹ ಕೆಡಿಸಿಕೊಳ್ಳದಿರಿ.

ಕನ್ಯಾ
ಗೊಂದಲದ ಮನಸ್ಥಿತಿ. ಕೆಲವು ಸಮಸ್ಯೆ ಪರಿಹರಿಸಲಾಗದೆ ತಿಣುಕಾಟ. ಇತರರ ನೆರವು ದೊರೆತರೆ ಅದನ್ನು ನಿರಾಕರಿಸಬೇಡಿ.

ತುಲಾ
ಇತರರ ಕುರಿತು ತಾಳ್ಮೆಯಿಂದ ವ್ಯವಹರಿಸಿ. ಎಲ್ಲರೂ ನೀವು ಬಯಸಿದಂತೆಯೆ ನಡೆದುಕೊಳ್ಳಬೇಕು ಎಂದು ಆಶಿಸದಿರಿ. ಹೊಂದಾಣಿಕೆಯಿರಲಿ.

ವೃಶ್ಚಿಕ
ಮಹತ್ವದಲ್ಲದ ವಿಷಯಕ್ಕೆ ಅತಿಯಾಗಿ ತಲೆ ಕೆಡಿಸಿಕೊಳ್ಳುವಿರಿ. ಆ ಮೂಲಕ ನಿಮಗೆ ನೀವೇ ಸಮಸ್ಯೆ ಸೃಷ್ಟಿಸಿಕೊಳ್ಳುವಿರಿ. ನಿರಾಳ ಮನಸ್ಸು ಮುಖ್ಯ.

ಧನು
ಆತುರದ ತೀರ್ಮಾನ, ಹಠಾತ್ ಪ್ರತಿಕ್ರಿಯೆ ತೋರಲು ಹೋಗದಿರಿ. ಅದು ಪ್ರತಿಕೂಲ ಪರಿಣಾಮ ಬೀರೀತು. ಸಂಯಮದಿಂದ ವರ್ತಿಸುವುದೊಳಿತು.

ಮಕರ
ಬಿಡುವಿಲ್ಲದ ಕೆಲಸದ ಮಧ್ಯೆಯೂ ಕುಟುಂಬದ ಕಡೆ ತುಸು ಗಮನ ಕೊಡಿ. ಕಡೆಗಣಿಸಿದ ಭಾವನೆ ಮೂಡದಿರಲಿ. ಆರ್ಥಿಕ ಮುಗ್ಗಟ್ಟು ಸಂಭವ.

ಕುಂಭ
ಗ್ರಹಗತಿಯ ಕಾರಣ ದಿಂದ ಭಾವನೆಗಳ ಉತ್ಕರ್ಷ. ಪ್ರೀತಿ ಅಥವಾ ದ್ವೇಷವನ್ನು ಅತಿಯಾಗಿ ಪ್ರದರ್ಶಿಸುವಿರಿ. ತಾಳ್ಮೆ ಇಂದು ಮುಖ್ಯ.

ಮೀನ
ಇತರರ ಜತೆ ಉತ್ತಮ ಸಂವಹನ ಸಾಧಿಸುವಿರಿ. ಅದರಿಂದ ಕೆಲಸಗಳು ಸುಲಭವಾಗುವವು. ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುವುದು. ಖರ್ಚು ಅಧಿಕ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!