ದಿನಭವಿಷ್ಯ| ಅಳೆದು ತೂಗಿ ಮಾತನಾಡಿದರೆ ಒಳಿತು..

 

ಮೇಷ
ಅಳೆದುಸುರಿದು ಮಾತುಗಳನ್ನಾಡಿ. ಮಾತುಗಳು ಅಪಾರ್ಥ ಸೃಷ್ಟಿಸದಂತೆ ನೋಡಿಕೊಳ್ಳಿ. ಇಲ್ಲವಾದರೆ ವಾಗ್ವಾದ ಉಂಟಾದೀತು.

ವೃಷಭ
ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ. ಕೌಟುಂಬಿಕ ಭಿನ್ನಮತಕ್ಕೆ ಸೌಹಾರ್ದ ಪರಿಹಾರ ಕಂಡುಕೊಳ್ಳಿ. ಸಂಘರ್ಷ ನಿಲುವಿನಿಂದ ಒಳಿತು ಆಗಲಾರದು.

ಮಿಥುನ
ವೃತ್ತಿಯಲ್ಲಿನ ಸಮಸ್ಯೆ ನಿರ್ಲಕ್ಷಿಸಬೇಡಿ. ಅದರ ಪರಿಹಾರಕ್ಕೆ ಕೆಲವು ಕಠಿಣ ಕ್ರಮ ತೆಗೆದುಕೊಳ್ಳಲು ಹಿಂಜರಿಯದಿರಿ. ಎಲ್ಲರ ಸಹಕಾರ ಸಿಕ್ಕಿಯೇ ಸಿಗುವುದು.

ಕಟಕ
ಆಪ್ತರೊಂದಿಗೆ ಸಣ್ಣಪುಟ್ಟ ಜಗಳಗಳಿಂದ ದೂರವಿರಿ. ಅದೇ ಜಗಳ ಉಲ್ಬಣಾವಸ್ಥೆ ತಲುಪಬಹುದು. ಯಾರ ವಿರುದ್ಧವೂ ಅವಹೇಳನ ಮಾಡದಿರಿ.

ಸಿಂಹ
ಕೌಟುಂಬಿಕ ಒತ್ತಡದಿಂದ ವಾಗ್ವಾದ  ಏರ್ಪಟ್ಟೀತು. ಸಂಧಾನದಿಂದ  ಅದನ್ನು ಪರಿಹರಿಸಿ. ವೃತ್ತಿಯ ವ್ಯವಹಾರದಲ್ಲಿ ಅಡ್ಡಿ ಒದಗಿಬರಬಹುದು. ತಾಳ್ಮೆಯಿರಲಿ.

ಕನ್ಯಾ
ಮನೆಯಲ್ಲಿ ಇತರರ ಅಭಿಪ್ರಾಯಕ್ಕೂ ಬೆಲೆ ಕೊಡಿ. ನಿಮ್ಮ ಹಠಮಾರಿ ಧೋರಣೆ ಬಿಟ್ಟುಬಿಡಿ. ವೃತ್ತಿಯಲ್ಲಿನ ಏರುಪೇರು ಮನಸ್ಸಿನ ನೆಮ್ಮದಿ ಕದಡಬಹುದು.

ತುಲಾ
ತುಸು ದೇಹಾಲಸ್ಯ ಕಾಡಬಹುದು. ಅದಕ್ಕೆ ನಿಮ್ಮ ಅನಾರೋಗ್ಯಕರ ಆಹಾರ ಸೇವನೆಯೂ ಕಾರಣವಾಗುತ್ತದೆ.  ಕೌಟುಂಬಿಕ ಭಿನ್ನಮತ ನಿವಾರಣೆ.

ವೃಶ್ಚಿಕ
ಮನೆಯವರ ಹಿತಾಸಕ್ತಿ ಗಮನಿಸಿ. ಅವರ ಬೇಕುಬೇಡಗಳಿಗೆ  ಕಿವಿಗೊಡಿ. ಹಣಕಾಸು ವಿಚಾರದಲ್ಲಿ ಎಚ್ಚರದಿಂದ ಹೆಜ್ಜೆಯಿಡಿ. ನಷ್ಟವಾಗದಂತೆ ನೋಡಿ.

ಧನು
ನಿಮ್ಮ ಸಂಬಂಧಿಗಳ ಕುರಿತಂತೆ ಇತರರು ಹರಡುವ ವದಂತಿಗೆ ಕಿವಿಗೊಡದಿರಿ.  ಅದರಿಂದ ಮನಸ್ಸಿನ ಶಾಂತಿ ಹಾಳಾದೀತಷ್ಟೆ. ಆರ್ಥಿಕ ಚೇತರಿಕೆ.

ಮಕರ
ಮನೆಯಲ್ಲಿ ಹೆಚ್ಚು ಕಾರ್ಯದ ಹೊರೆ ಬಿದ್ದೀತು. ಅದನ್ನು ನಿಭಾಯಿಸಲೇ ಬೇಕು. ವೃತ್ತಿಯಲ್ಲಿ ಕೆಲವರ ಅಸಮಾಧಾನ ಎದುರಿಸುವಿರಿ.

ಕುಂಭ
ಸಮಯದೊಳಗೆ ನಿಮ್ಮ ಕೆಲಸ ಮುಗಿಸಲು ಕಷ್ಟ ಪಡುವಿರಿ. ಮಾನಸಿಕ ಒತ್ತಡ ಹೆಚ್ಚು. ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ಕೌಟುಂಬಿಕ ಸಹಕಾರ.

ಮೀನ
ಕೆಲಸದ ಕ್ಷೇತ್ರದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣ. ಅದನ್ನು ಎಚ್ಚರದಿಂದ ನಿಭಾಯಿಸಿ. ಅತಿರೇಕದ ಕ್ರಮ ತೆಗೆದುಕೊಳ್ಳಲು ಹೋಗದಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!